Advertisement

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

10:42 PM May 10, 2024 | Team Udayavani |

ಕಾಸರಗೋಡು: ಅಂತಾರಾಜ್ಯ ವಾಹನ ಕಳವು ತಂಡದ ಇಬ್ಬರನ್ನು ವಿದ್ಯಾನಗರ ಪೊಲೀಸರು ಮಾಯಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಮಂಗಳೂರು ಗುಡ್ಡೆ ಕಣ್ಣೂರು ಬಳ್ಳೂರು ನಿವಾಸಿ ಮೊಹಮ್ಮದ್‌ ಅಲ್‌ಫಾಸ್‌ (24) ಮತ್ತು ಮಂಗಳೂರು ಪಂಜಿಮೊಗರು ಮಂಜೋಟಿ ಮಸೀದಿ ರಸ್ತೆ ಬಳಿಯ ಮುಸಾಂಬಿಲ್‌ ಹುಸೈನ್‌(20) ಬಂಧಿತರು.

Advertisement

ವಿದ್ಯಾನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿನೋಯ್‌ ಕೆ.ಜೆ. ಅವರ ಮಾರ್ಗದರ್ಶನದಲ್ಲಿ ಎಸ್‌.ಐ. ದೀಪ್ತಿ ವಿ.ವಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಕಳವುಗೈದಿರುವ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

2023 ಡಿ.18 ರಂದು ರಾತ್ರಿ ಎಡನೀರು ಪಾಡಿ ಕೋರಿಕ್ಕಾರಿನ ಮುಹಶಿರ್‌ ಅವರ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಅವರ ಸಹೋದರ ಮುಬಶಿರ್‌ ಅವರ ಬೈಕ್‌ ಕಳವಾಗಿತ್ತು. ಮಂಗಳೂರಿನ ಶಕೀಲ್‌ ಈ ಬೈಕ್‌ನ್ನು ಕಳವು ಮಾಡಿದ್ದನೆಂದೂ, ಅದನ್ನು ಮಾರಾಟ ಮಾಡಲು ತಮಗೆ ನೀಡಿದ್ದಾನೆಂದು ಬಂಧಿತರು ಪೊಲೀಸರಿಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next