Advertisement

ತರೂರ್‌ ವಿರುದ್ಧ ಮೋಹನ್‌ಲಾಲ್‌?

06:45 AM Sep 05, 2018 | Karthik A |

ತಿರುವನಂತಪುರಂ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದ ಹಾಲಿ ಸಂಸದ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಎದುರು, ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಕಣಕ್ಕಿಳಿಯಲಿದ್ದಾರೆಯೇ? ಇಂಥ ರೋಚಕ ವದಂತಿಯೊಂದು ರಾಜಕೀಯ ಪಾಳಯದಲ್ಲಿ ಹರಿದಾಡುತ್ತಿದೆ. ಸೋಮವಾರ, ಮೋಹನ್‌ ಲಾಲ್‌ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಬಂದಿರುವುದು ಈ ವದಂತಿ ಹರಿದಾಡಲು ಕಾರಣ. ಭೇಟಿ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ಮೋಹನ್‌ ಲಾಲ್‌ ಜೀ ಅವರನ್ನು ಭೇಟಿಯಾಗಿದ್ದು ಖುಷಿ ತಂದಿದೆ. ಅವರ ಮಾನವೀಯತೆ ಹೃದಯ ತುಂಬುವಂತಿದೆ. ಅವರ ಸಾಮಾಜಿಕ ಸೇವೆಗಳು ಸ್ಫೂರ್ತಿದಾಯಕ ‘ಎಂದಿರುವುದು ವದಂತಿಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಟ್ಟಿದೆ. ಇತ್ತ, ಲಾಲ್‌ ಕೂಡ ಭೇಟಿ ವಿಚಾರವನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದು, ನನ್ನ ‘ವಿಶ್ವಶಾಂತಿ ಫೌಂಡೇಶನ್‌’ ವತಿಯಿಂದ ಕೈಗೊಳ್ಳಲಾಗಿರುವ ಸಮಾಜ ಸೇವೆಗಳಿಗೆ ನೆರವು ನೀಡುವುದಾಗಿ ಪ್ರಧಾನಿ ಆಶ್ವಾಸನೆ ನೀಡಿದ್ದಾರೆಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next