Advertisement

ಇದನ್ನೇ ‘ಕರ್ಮ’ಎಂದು ಕರೆಯುತ್ತಾರೆ…! : ಅಖ್ತರ್ ಗೆ ಶಮಿ ತಿರುಗೇಟು!

06:26 PM Nov 13, 2022 | Team Udayavani |

ನವದೆಹಲಿ : ಟಿ20 ವಿಶ್ವಕಪ್ 2022ರ ಫೈನಲ್‌ನಲ್ಲಿ ಪಾಕಿಸ್ಥಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲನುಭವಿಸಿದ್ದು, ಪಾಕ್ ಬೆಂಬಲಿಗರನ್ನು, ಮಾಜಿ ಕ್ರಿಕೆಟಿಗರನ್ನು ಎದೆಗುಂದುವಂತೆ ಮಾಡಿದೆ.

Advertisement

ಪಾಕ್ ತಂಡದ ಅಪ್ರತಿಮ ವೇಗಿಗಳಲ್ಲಿ ಒಬ್ಬರಾದ ಮಾಜಿ ಆಟಗಾರ ಶೋಯೆಬ್ ಅಖ್ತರ್, ತಂಡದ ಸೋಲಿನ ನಂತರ ಟ್ವಿಟರ್‌ನಲ್ಲಿ ‘ಒಡೆದ ಹೃದಯ’ ಎಮೋಜಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಅಖ್ತರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಇದು ‘ಕರ್ಮ’ ಎಂದು ರೀ ಟ್ವೀಟ್ ಮಾಡಿದ್ದಾರೆ.

“ಕ್ಷಮಿಸಿ ಸಹೋದರ ಇದನ್ನೇ ಕರ್ಮ ಎಂದು ಕರೆಯುತ್ತಾರೆ,”ಎಂದು ಅಖ್ತರ್ ಅವರ ‘ಒಡೆದ ಹೃದಯ’ ಎಮೋಜಿಗೆ ಪ್ರತಿಕ್ರಿಯಿಸಿ ಶಮಿ ಟ್ವೀಟ್ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ , ಅಖ್ತರ್ ಅವರ ಪೋಸ್ಟ್ ಕುರಿತು ಶಮಿ ಅವರ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next