Advertisement

Mogaveera Family; ಶ್ರೀ ಸತ್ಯನಾರಾಯಣ ಪೂಜೆ

06:43 PM Sep 09, 2023 | Team Udayavani |

ಮೋಗವೀರ್ಸ್‌ ಯುಎಇ ವತಿಯಿಂದ ಪ್ರತೀ ವರ್ಷ ಜರಗುವ ಶ್ರೀ ಸತ್ಯನಾರಾಯಣ ಪೂಜೆಯನ್ನು ದುಬೈನ ಜೆ.ಎಸ್‌.ಎಸ್‌. ಪ್ರೈವೇಟ್‌ ಸ್ಕೂಲ್‌ನ ಸಭಾಂಗಣದಲ್ಲಿ ಸೆ.3ರಂದು ಹಮ್ಮಿಕೊಳ್ಳಲಾಗಿತ್ತು. ರಘುಭಟ್‌ ಅವರ ಪೌರೋಹಿತ್ಯದಲ್ಲಿ ಭಕ್ತಿಪೂರ್ವಕವಾಗಿ ಪೂಜೆಯನ್ನು ನೇರವೇರಿಸಲಾಯಿತು.

Advertisement

ಸಂಘದ ಮಹಿಳಾ ಸದಸ್ಯರು ದೀಪ ಪ್ರಜ್ವಲನೆ ಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿರಿಯರಾದ ಸಿಎ ಪ್ರಮೋದ್‌ ಕುಂದರ್‌ ಹಾಗೂ ಉಷಾ ಪಿ. ಕುಂದರ್‌ ದಂಪತಿಗಳು ಪೂಜಾ ಸಂಕಲ್ಪ ಕಾರ್ಯವನ್ನು ನೆರವೇರಿಸಿಕೊಟ್ಟರು. ಸದಸ್ಯರಾದ ಸಚಿನ್‌ ಗುಜರನ್‌ ಹಾಗೂ ತಂಡದವರು ಹರಿನಾಮ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಸಂಘದ ಇತರ ಸದಸ್ಯರು ಮತ್ತು ಮಹಿಳಾ ತಂಡದವರಿಂದ ಕುಣಿತ ಭಜನೆ, ಸ್ಯಾಕೊÕàಫೋನ್‌ ವಾದ್ಯಬ ಸಂಗೀತ ಕಾರ್ಯಕ್ರಮಗಳು ಜರಗಿದವು. ಪೂಜೆಯ ಕೊನೆಯಲ್ಲಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೊಗವೀರ್ಸ್‌ ಯುಎಇ ಪದಾಧಿಕಾರಿಗಳಾದ ಸಿಎ ಲೋಕೇಶ್‌ ಪುತ್ರನ್‌, ಬಾಲಕೃಷ್ಣ ಸಾಲಿಯಾನ್‌, ವಿನೋದ್‌ ಕಾಂಚನ್‌, ಪುರುಷೋತ್ತಮ್‌ ಸುವರ್ಣ, ಗೋವರ್ಧನ್‌ ಸಾಲಿಯಾನ್‌, ಯತೀಶ್‌ ಪುತ್ರನ್‌, ನಿರಂಜನ್‌ ಪಡುಬಿದ್ರಿ, ಶಶಿಧರ್‌ ಕೋಟ್ಯಾನ್‌, ದೀಪಕ್‌ ರಾಜ್‌, ಯಶವಿಂದ್‌ ಬೆಂಗ್ರೆ, ಲೋಹಿತ್‌ ಮೆಂಡನ್‌, ಕಿಶೋರ್‌ ಬಂಗೇರ, ಬಲರಾಮ್‌, ಬಲರಾಜ್‌ ಮತ್ತು ಮಹಿಳಾ ಸದಸ್ಯರಾದ ನೀತಾ ಎಲ್‌. ಪುತ್ರನ್‌, ಲಕ್ಷ್ಮೀ ಬಿ. ಸಾಲಿಯಾನ್‌, ನಳಿನಿ ದೀಪಕ್‌, ಸುಪ್ರಿಯಾ ವಿ. ಕಾಂಚನ್‌ ಮುಂತಾದವರು ಉಪಸ್ಥಿತರಿದ್ದರು. ಸುಮಾರು ಐನೂರಕ್ಕೂಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next