Advertisement

ಮೊಗವೀರ ಮಹಾಜನ ಸೇವಾ ಸಂಘ: ಪ್ರತಿಭಾ ಪುರಸ್ಕಾರ

04:58 PM Oct 31, 2018 | |

ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 77 ನೇ ವಾರ್ಷಿಕ ಮಹಾಸಭೆಯು ಅ.21 ರಂದು ಫೋರ್ಟ್‌ ಪರಿಸರದ ಕಾಂಜಿಕೇತ್ಸಿ ಸಭಾಗೃಹದಲ್ಲಿ ನಡೆಯಿತು.

Advertisement

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ನಾರಾಯಣ ಎಚ್‌. ಬಗ್ವಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರದೀಪ್‌ ಚಂದನ್‌,  ನೂತನ ಅಧ್ಯಕ್ಷ ರಮೇಶ್‌ ಎಂ. ಬಂಗೇರ, ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್‌, ಕೋಶಾಧಿಕಾರಿ ಸಂಜೀವ ಕುಂದರ್‌, ಜತೆ ಕೋಶಾಧಿಕಾರಿ ಸತೀಶ್‌ ಶ್ರೀಯಾನ್‌, ಮಾಜಿ ಅಧ್ಯಕ್ಷರುಗಳಾದ ಸುರೇಶ್‌ ಕಾಂಚನ್‌, ಮಹಾಬಲ ಕುಂದರ್‌, ಗೋಪಾಲ್‌ ಪುತ್ರನ್‌, ಉಪಾಧ್ಯಕ್ಷರುಗಳಾದ ರಮೇಶ್‌ ಬಂಗೇರ, ರಾಜೇಂದ್ರ ಚಂದನ್‌, ಉದ್ಯಮಿ ರತ್ನಾಕರ ಚಂದನ್‌, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ರಘುರಾಮ ಚಂದನ್‌, ನಾರಾಯಣ ಚಂದನ್‌, ಗೋಪಾಲ್‌ ಚಂದನ್‌, ಭಾಸ್ಕರ್‌ ಕಾಂಚನ್‌, ಸುಚಿತ್ರಾ ಪುತ್ರನ್‌, ಮಂಜುನಾಥ ನಾಯ್ಕ, ಅರವಿಂದ ಪುತ್ರನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next