Advertisement

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

12:50 AM Apr 20, 2024 | Team Udayavani |

ಉಡುಪಿ: ಕೇಂದ್ರ ಸರಕಾರದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಮೋಸವಾಗಿದೆ ಎಂದು ಕಾಂಗ್ರೆಸ್‌ ಸುಳ್ಳು ಹೇಳು ತ್ತಿದೆ. ಸಂವಿಧಾನದ 280ನೇ ವಿಧಿಯ ಪ್ರಕಾರವೇ ಅನುದಾನ ಹಂಚಿಕೆ ಯಾಗುತ್ತದೆ. ಅದರಂತೆ ರಾಜ್ಯಕ್ಕೆ 6,500 ಕೋ.ರೂ. ನೀಡಲಾಗಿದೆ. ಕಾಂಗ್ರೆಸ್‌ ತನ್ನ ಸುಳ್ಳಿಗೆ ವಿವರಣೆ ನೀಡಲಿ ಎಂದು ಕೇಂದ್ರ ಸಚಿವೆ ಹಾಗೂ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಆಗ್ರಹಿಸಿದರು.

Advertisement

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಉಪ್ಪೂರಿನ ರಾಮಕ್ಷತ್ರಿಯ ಸಭಾ ಭವನದಲ್ಲಿ ಶುಕ್ರವಾರ ನಡೆದ ನಾರೀ ಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿ, ಮಹಿಳೆಯರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯನ್ನೂ ಕಾಂಗ್ರೆ ಸ್‌ ನಿರ್ಮಿಸಿಲ್ಲ. ಕೇವಲ ಶೇ. 30ರಷ್ಟು ಇದ್ದ ಶೌಚಾಲಯ ವ್ಯವಸ್ಥೆ ಈಗ ಶೇ. 90 ಆಗಿದೆ. ಕೇವಲ 8 ಕೋಟಿ ಬ್ಯಾಂಕ್‌ ಅಕೌಂಟ್‌ ಈಗ 52 ಕೋಟಿಗೆ ಏರಿದೆ. ಮಹಿಳೆಯರ ಶ್ರೇಯೋಭಿ ವೃದ್ಧಿಗೆ ಪ್ರಧಾನಿ ಮೋದಿ ಬಹಳಷ್ಟು ಕೊಡುಗೆ ನೀಡಿ ಮಹಿಳೆಯರ ಆತ್ಮ ಗೌರವ ಹೆಚ್ಚಿಸಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿಗೆ ನಿಜವಾದ ಗ್ಯಾರಂಟಿ ಎಂದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಪ್ರಭಾರಿ ಉದಯಕುಮಾರ ಶೆಟ್ಟಿ, ಶಿಲ್ಪಾ ಜಿ. ಸುವರ್ಣ ಮತ್ತಿತರರು ಭಾಗವಹಿಸಿದ್ದರು.

ರಾಜ್ಯ ಸರಕಾರದ ಗ್ಯಾರಂಟಿಗೆ ಮೋಸ ಹೋಗದಿರಿ: ಸುಮಲತಾ
ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರು ತುಳುವಿನಲ್ಲಿಯೇ ಮಾತು ಆರಂಭಿಸಿದರು. ಮಾತೆರೆಗ್ಲಾ ನಮಸ್ಕಾರ. ಉಡುಪಿಗ್‌ ಬನ್ನಗ ಮಸ್ತ್ ಖುಷಿ ಆಪುಂಡು, ಅಂಬರೀಶ್‌ಗ್‌ಲಾ ಉಡುಪಿ ಫೇವರೆಟ್‌ ಪ್ಲೇಸ್‌ ಎಂದರು. ತಪ್ಪು-ಸರಿ ಆಯ್ಕೆ ಇದ್ದಾಗ ಸರಿಯನ್ನೇ ಆಯ್ಕೆ ಮಾಡಬೇಕು. ಮೋದಿಯವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next