Advertisement

ದೇಶದ ಉದ್ದಗಲಕ್ಕೂ ಮೋದಿ ಮೋಡಿ: ಆರಗ ಜ್ಞಾನೇಂದ್ರ

05:15 AM Jul 20, 2017 | Team Udayavani |

ಉಡುಪಿ: ದೇಶದ ಉದ್ದಗಲಕ್ಕೂ ಜನರ ಮನೆ ಮತ್ತು ಮನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭದ್ರವಾಗಿ ನೆಲೆಯೂರಿದ್ದು, ಇದರಿಂದ ಪಕ್ಷದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಗೆ ಜನರ ಸಂಪರ್ಕ ಅತ್ಯಂತ ಸುಲಭವಾಗಿದೆ ಎಂದು ತೀರ್ಥಹಳ್ಳಿ ಮಾಜಿ ಶಾಸಕ, ಉಡುಪಿ ವಿಧಾನಸಭಾ ಕ್ಷೇತ್ರದ ವಿಸ್ತಾರಕರಾದ ಆರಗ ಜ್ಞಾನೇಂದ್ರ ಹೇಳಿದರು. 

Advertisement

ಉಡುಪಿ ನಗರ ಕಚೇರಿಯಲ್ಲಿ ನಡೆದ ನಗರಸಭಾ ಸದಸ್ಯರು, ವಾರ್ಡ್‌ ಸಮಿತಿಯ ಪ್ರಮುಖರ ಸಭೆಯಲ್ಲಿ ಮಾತನಾಡಿ ಕೇವಲ 3 ವರ್ಷಗಳ ಆಡಳಿತದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮೋದಿ ಪ್ರಭಾವ ಬೀರಿದ್ದು ಭಾರತವನ್ನು ಇಡೀ ವಿಶ್ವವೇ ಹೊಸ ಭರವಸೆಯಿಂದ ನೋಡುವಂತಾಗಿದೆ. ಜನಪ್ರತಿನಿಧಿಗಳು, ಕಾರ್ಯಕರ್ತರು ಕೇಂದ್ರದ ಸಾಧನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು. 

ಮಾಜಿ ಶಾಸಕ ರಘುಪತಿ ಭಟ್‌, ನಗರಾಧ್ಯಕ್ಷ ಪ್ರಭಾಕರ್‌ ಪೂಜಾರಿ, ಪ್ರ. ಕಾರ್ಯದರ್ಶಿ ಜಗದೀಶ್‌ ಆಚಾರ್ಯ, ಯುವ ಮೋರ್ಚಾ ಜಿÇÉಾಧ್ಯಕ್ಷ ಶ್ರೀಶ ನಾಯಕ್‌, ಜಿ. ಪಂ. ಅಧ್ಯಕ್ಷ ದಿನಕರ್‌ ಬಾಬು, ನಗರಸಭೆ ವಿಪಕ್ಷ ನಾಯಕ ಡಾ| ಎಂ. ಆರ್‌. ಪೈ, ಮನೋಹರ್‌ ಕಲ್ಮಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next