Advertisement

ಪ್ರಕಾಶ್‌ ಸಿಂಗ್‌ ಬಾದಲ್‌ಗೆ ಮೋದಿ ಅಂತಿಮ ನಮನ

12:18 AM Apr 27, 2023 | Team Udayavani |

ಚಂಡೀಗಢ: ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದ ಪಂಜಾಬ್‌ ಮಾಜಿ , ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್‌ ಸಿಂಗ್‌ ಬಾದಲ್‌ಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ.

Advertisement

ಚಂಡೀಗಢದಲ್ಲಿ ನಡೆದ ಬಾದಲ್‌ ಅವರ ಅಂತಿಮದರ್ಶನದಲ್ಲಿ ಪ್ರಧಾನಿ ಪಾಲ್ಗೊಂಡು ಅಂತಿಮ ಪುಷ್ಪ ನಮನ ಸಲ್ಲಿಸಿದ್ದಾರೆ.ಅಲ್ಲದೇ, ಪಂಜಾಬ್‌ನ ಅಭಿವೃದ್ಧಿಗೆ ಶ್ರಮಿಸಿದ ಬಾದಲ್‌ ದೇಶಕಂಡ ಶ್ರೇಷ್ಠ ರಾಜನೀತಿ ತಜ್ಞ. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದ್ದಾರೆ. ಇನ್ನು ಬಾದಲ್‌ ಅವರ ನಿಧನ ನಿಮಿತ್ತ ಕೇಂದ್ರಸರ್ಕಾರ ರಾಷ್ಟಾéದ್ಯಂತ 2 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನ ದೇಶದಲ್ಲಿ ತಿವರ್ಣಅರ್ಧದಲ್ಲಿ ಹಾರಲಿದೆ ಎಂದು ಪ್ರಕಟಣೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next