Advertisement

ಮೋದಿ, ಜೇಟ್ಲಿಗೆ ಅರ್ಥಶಾಸ್ತ್ರದ ಜ್ಞಾನವಿಲ್ಲ: ಸ್ವಾಮಿ

11:50 AM Mar 24, 2019 | Lakshmi GovindaRaju |

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಅರ್ಥಶಾಸ್ತ್ರದ ಬಗ್ಗೆ ಜ್ಞಾನವಿಲ್ಲ ಎಂದು ಬಿಜೆಪಿಯ ಸಂಸದ ಸುಬ್ರಮಣ್ಯನ್‌ ಸ್ವಾಮಿ ಹೇಳಿದ್ದಾರೆ. ಆದರೆ, ಇದು ಟೀಕೆಯಲ್ಲ.

Advertisement

ಬದಲಿಗೆ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರಗಳಲ್ಲಿ ಭಾರತ ಎಷ್ಟನೆಯದ್ದೆಂದು ಅರಿಯುವಲ್ಲಿ ಮೋದಿ, ಜೇಟ್ಲಿ ಎಡವಿದ್ದಾರೆಂದು ಹೇಳಲು ಸ್ವಾಮಿ ಈ ರೀತಿಯಾಗಿ ಹೇಳಿದ್ದಾರೆ.

“ಅಸಲಿಗೆ, ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ 3ನೇ ಆರ್ಥಿಕತೆ. ಆದರೆ, ಇದರ ಬಗ್ಗೆ ಅಷ್ಟಾಗಿ ತಿಳಿಯದ ಮೋದಿ ಹಾಗೂ ಜೇಟ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ 5ನೇ ಆರ್ಥಿಕತೆ ಎಂದು ಹೇಳುತ್ತಿದ್ದಾರೆ” ಎಂದು ಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next