Advertisement

Terrorism: ವಿದೇಶದಲ್ಲಿನ ಉಗ್ರರ ಬಗ್ಗೆ ಮೋದಿ ಕಳವಳ

12:14 AM Dec 21, 2023 | Team Udayavani |

ಹೊಸದಿಲ್ಲಿ: ವಿದೇಶದಲ್ಲಿದ್ದುಕೊಂಡು ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉಗ್ರಗುಂಪುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಫೈನಾನ್ಶಿಯಲ್‌ ಟೈಮ್ಸ್‌ಗೆ ಸಂದರ್ಶನ ನೀಡಿರುವ ಮೋದಿ, ಈ ಉಗ್ರಗುಂಪುಗಳು ಹೆದರಿಸುವ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಕೆಲಸದಲ್ಲಿ ನಿರತವಾಗಿವೆ ಎಂದು ಹೇಳಿದ್ದಾರೆ. ಖಲಿಸ್ಥಾನಿ ಉಗ್ರರನ್ನು ಕೊಲ್ಲಲು ಭಾರತ ಸರಕಾರ ಸಂಚು ಮಾಡಿದೆ ಎಂದು ಅಮೆರಿಕ ಆರೋಪಿಸಿದ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಮೋದಿ ಇಂತಹ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಭಾರತ ಸತತವಾಗಿ ಉಗ್ರಗುಂಪುಗಳ ಬಗ್ಗೆ ವಿದೇಶಗಳ ಗಮನ ಸೆಳೆಯುವ ಯತ್ನ ಮಾಡುತ್ತಲೇ ಇದೆ. ಇತ್ತೀಚೆಗೆ ಕೆನಡಾ ಸರಕಾರ, ತನ್ನ ಪ್ರಜೆ ಹರ್ದೀಪ್‌ ಸಿಂಗ್‌ ನಿಜ್ಜರ್‌ರನ್ನು ಭಾರತದ ಗುಪ್ತಚರ ಏಜೆಂಟ್‌ಗಳು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿತ್ತು. ಇದನ್ನು ಭಾರತ ತಿರಸ್ಕರಿಸಿದ್ದರಿಂದ ಎರಡೂ ಸರಕಾರಗಳ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಅದೇ ರೀತಿ ಅಮೆರಿಕ, ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುವನ್ನು ಕೊಲ್ಲಲು ಭಾರತೀಯ ನಿಖೀಲ್‌ ಗುಪ್ತ ಸುಪಾರಿ ಪಡೆದಿದ್ದಾನೆ ಎಂದು ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಭಾರತದ ಯಾವುದೇ ನಾಗರಿಕ ಯಾವುದೇ ಸರಿ, ತಪ್ಪುಗಳಲ್ಲಿ ಭಾಗಿಯಾಗಿದ್ದರೆ, ಅದನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಗಮನ ಹರಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next