Advertisement

ಆಸಿಯಾನ್‌ ರಾಷ್ಟ್ರಗಳಿಗೆ ಧೈರ್ಯ ತುಂಬಿದ ಮೋದಿ

12:52 AM Nov 13, 2020 | mahesh |

ನವದೆಹಲಿ: ಚೀನಾ ಜತೆಗಿನ ಸಮುದ್ರ ಗಡಿಬಿಕ್ಕಟ್ಟು ಹೊಂದಿರುವ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. “ಆಸಿಯಾನ್‌ ರಾಷ್ಟ್ರಗಳೊಂದಿಗಿನ ಸಂಪರ್ಕ ವರ್ಧನೆ ಭಾರತದ ಪ್ರಮುಖ ಆದ್ಯತೆ’ ಎಂದು ಭರವಸೆ ನೀಡಿದ್ದಾರೆ.

Advertisement

ಆಸಿಯಾನ್‌ ರಾಷ್ಟ್ರಗಳೊಂದಿಗಿನ ವರ್ಚುವಲ್‌ ಶೃಂಗದಲ್ಲಿ ಅವರು, “ಸಾಮಾಜಿಕ, ತಂತ್ರಜ್ಞಾನ, ಆರ್ಥಿಕತೆ ಸೇರಿದಂತೆ ಆಸಿಯಾನ್‌ನ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಸಾಧಿಸುವುದು ಭಾರತದ ಮುಖ್ಯ ಉದ್ದೇಶ. ಕೆಲವು ವರ್ಷಗಳಿಂದ ನಾವು ಈ ಎಲ್ಲ ರಂಗದಲ್ಲೂ ಹತ್ತಿರ ಬಂದಿದ್ದೇವೆ ಎಂದರು.

ಆಸಿಯಾನ್‌ ಯಾವಾಗಲೂ ನಮ್ಮ ಪೂರ್ವ ನೀತಿ ಕಾಯ್ದೆಯ ಪ್ರಮುಖ ಭಾಗವೇ ಆಗಿದೆ. ಭಾರತದ ಇಂಡೋ- ಪೆಸಿಫಿಕ್‌ ಕಾರ್ಯ ತಂತ್ರಗಳು, ಆಸಿಯಾನ್‌ ಕೂಟದ ಇಂಡೋ-ಪೆಸಿಫಿಕ್‌ ದೃಷ್ಟಿಕೋನಗಳ ನಡುವೆ ಬಹಳ ಸಾಮ್ಯತೆ ಇದೆ. ಆಸಿಯಾನ್‌ನ ಎಲ್ಲ ವಲಯಗಳ ಭದ್ರತೆ ಮತ್ತು ಅಭಿ ವೃದ್ಧಿಗೆ ಭಾರತ ಸ್ಪಂದಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಮೋದಿ ಜತೆಗೆ ವಿಯೆಟ್ನಾಂ ಪ್ರಧಾನಿ ಎನ್‌ಗ್ಯುಯೆನ್‌ ಕ್ಸುವಾನ್‌ ಫ‌ುಕ್‌ ಗಣ್ಯ ಉಪಸ್ಥಿತಿ ವಹಿಸಿದ್ದರು. ಇಂಡೋ ನೇಷ್ಯಾ, ಥಾಯ್ಲೆಂಡ್‌, ಸಿಂಗಾಪುರ, ಫಿಲಿಪ್ಪೀನ್ಸ್‌, ವಿಯೆಟ್ನಾಂ, ಬ್ರುನೀ, ಕಾಂಬೋ ಡಿಯಾ, ಮ್ಯಾನ್ಮಾರ್‌, ಲಾವೋಸ್‌- ಆಸಿಯಾನ್‌ನ ಸದಸ್ಯ ರಾಷ್ಟ್ರ ಗಳು. ಈ ಎಲ್ಲ ರಾಷ್ಟ್ರಗಳೂ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿದ್ದು, ಚೀನಾ ಜತೆಗೆ ಗಡಿ ಬಿಕ್ಕಟ್ಟನ್ನು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next