Advertisement

ಪ್ರತಿಕೂಲ ಹವಾಮಾನ: ವಿಮಾನ ನಿಲ್ದಾಣದಲ್ಲೇ ಉಳಿದ ಪಿಎಂ ಮೋದಿ

06:18 AM Feb 14, 2019 | Team Udayavani |

ಡೆಹರಾಡೂನ್‌: ಇಂದು ಗುರುವಾರ ರುದ್ರಪುರದಲ್ಲಿನ ರಾಲಿಯಲ್ಲಿ ಭಾಷಣ ಮಾಡಬೇಕಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಳಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ಇಲ್ಲಿನ ಜಾಲಿ ಗ್ರ್ಯಾಂಟ್‌ ಏರ್‌ ಪೋರ್ಟ್‌ ನಲ್ಲಿ ತಡೆಹಿಡಿಯಲ್ಪಟ್ಟಿದ್ದಾರೆ.  ಮೋದಿ ಅವರ ಹೆಲಿಕಾಪ್ಟರ್‌ ಗೆ ಪ್ರತಿಕೂಲ ಹವಾಮಾನದಿಂದಾಗಿ ಹಾರಲು ಸಾಧ್ಯವಾಗಿಲ್ಲ. 

Advertisement

ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7.15ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದರು. ಆದರೆ ರುದ್ರಪುರಕ್ಕೆ ಹೋಗಲು ಅವರ ಹೆಲಿಕಾಪ್ಟರ್‌ ಗೆ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ಹಾಗಾಗಿ ಮೋದಿ ಅವರು ಹವಾಮಾನ ತಿಳಿಯಾಗುವುದನ್ನು ಕಾಯುತ್ತಿದ್ದಾರೆ ಎಂದು ಎಡಿಜಿಪಿ ಅಶೋಕ್‌ ಕುಮಾರ ತಿಳಿಸಿದರು. ಬೆಳಗ್ಗಿನಿಂದಲೂ ಇಲ್ಲಿ ಮಳೆಯಾಗುತ್ತಿರುವುದೇ ಅಡ್ಡಿಯಾಗಿದೆ. 

ರುದ್ರಪುರದಲ್ಲಿ  ಇಂದು ಪ್ರಧಾನಿ ಮೋದಿ ಸಾರ್ವಜನಿಕ ಭಾಷಣ ಮಾಡಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next