Advertisement

“ಮೋದಿ ಸರಕಾರ ಅನಿವಾರ್ಯ’: ಅನ್ವರ್‌ ಮಾಣಿಪ್ಪಾಡಿ

10:44 AM Apr 03, 2019 | Team Udayavani |

ಮಂಗಳೂರು: ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಧ್ಯೇಯವಾಕ್ಯದಡಿ ಪ್ರಧಾನಿ ಮೋದಿ ದೇಶದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ ಭಾರತದ ಸಮಗ್ರ ಬೆಳವಣಿಗೆಗೆ ಮೋದಿ ಸರಕಾರ ಅನಿವಾರ್ಯ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಉಜ್ವಲ ಯೋಜನೆಯಡಿ ರಾಜ್ಯ ದಲ್ಲಿ 22 ಲಕ್ಷ ಮಂದಿಗೆ ಈ ಸೌಲಭ್ಯ ದೊರೆತಿದೆ. ದೇಶವ್ಯಾಪಿಯಾಗಿ ಮುಸ್ಲಿಮ ರಿಗೆ 1.1 ಕೋಟಿ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ. ಹಿಂದೂ ಉಗ್ರವಾದ ಎಂಬ ರೀತಿಯಲ್ಲಿ ಪದ ಬಳಕೆ ಮಾಡಿದ ರಾಹುಲ್‌ ಗಾಂಧಿ ಹೇಳಿಕೆ ಖಂಡ ನೀಯ. ಅಲ್ಪಸಂಖ್ಯಾಕರ ಮತಗಳ ಮೇಲೆ ಕಣ್ಣಿಟ್ಟು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಯಿಂದಾಗಿ ವಿದೇಶಗಳಲ್ಲೂ ಇಂದು ಭಾರತೀಯರಿಗೆ ವಿಶೇಷ ಗೌರವ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನತೆ ಮೋದಿ ಅವರನ್ನು ಗೆಲ್ಲಿಸುತ್ತಾರೆ ಎಂದು ಅನ್ವರ್‌ ಮಾಣಿಪ್ಪಾಡಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next