Advertisement

ಮೋದಿ ಅಭಿಮಾನಿಗಳಿಂದ ಮಂತ್ರಾಲಯಕ್ಕೆ ಪಾದಯಾತ್ರೆ

01:34 PM Jan 22, 2022 | Team Udayavani |

ಮಸ್ಕಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಪ್ರಾಪ್ತಿ ಹಾಗೂ ಕುಡಚಿ ಶಾಸಕ ಪಿ.ರಾಜೀವ್‌, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅವರಿಗೆ ಉತ್ತಮ ಸ್ಥಾನ-ಮಾನ ದೊರೆಯಲಿ ಎಂದು ಹರಕೆ ಹೊತ್ತು ಮಾರಲದಿನ್ನಿ ತಾಂಡಾದ ಯುವಕ ನಾಗರಾಜ ಪವಾರ್‌ ಮಂತ್ರಾಲಯಕ್ಕೆ ಬರಿಗಾಲಲ್ಲಿ ಪಾದಯಾತ್ರೆ ನಡೆಸಿದರು.
ಪಟ್ಟಣದ ಬ್ರಮಾರಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಆವರಣದ ಮುಂಭಾಗದಲ್ಲಿ ಪಾದಯಾತ್ರೆ ಆರಂಭಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪಾದಯಾತ್ರೆಗೆ ಚಾಲನೆ ನೀಡಿದರು.

Advertisement

ನಂತರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ರಾಷ್ಟ್ರ ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವ ದೋಷ ದೂರವಾಗಬೇಕು ಎಂದು ಮಸ್ಕಿ ಪಟ್ಟಣದಿಂದ 125 ಕಿ.ಮೀ. ಪಾದಯಾತ್ರೆಯನ್ನು ಕ್ಷೇತ್ರದ ಮಾರಲದಿನ್ನಿಯ ಬಿಜೆಪಿ ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಯಾದ ನಾಗರಾಜ ಅವರು ಬರಿಗಾಗಲಿನಲ್ಲಿ ಪ್ರಧಾನಿ ಮೋದಿ ಆರೋಗ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ಪಾದಯಾತ್ರೆ ಮಾಡುತ್ತಿದ್ದು, ಇದರಿಂದ ದೇಶದ ಪ್ರಧಾನಿಯವರಿಗೆ ಅವರ ಅಭಿಮಾನಿಗಳ ಹಾರೈಕೆಯಂತೆ ದೇವರು ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿ ಮಾಡಲಿ ಎಂದರು.

ಮುಖಂಡರಾದ ಮಹಾದೇವಪ್ಪ ಗೌಡ ಪಾಟೀಲ್‌, ಡಾ| ಶಿವಶರಣಪ್ಪ ಇತ್ಲಿ, ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪೊಲೀಸ್‌ ಪಾಟೀಲ್‌, ಪುರಸಭೆ ಸದಸ್ಯರಾದ ರವಿಗೌಡ ಪಾಟೀಲ್‌, ಮೌನೇಶ ಮುರಾರಿ, ಚೇತನ ಪಾಟೀಲ್‌, ಶರಣಯ್ಯ ಸೊಪ್ಪಮಠ, ಮಸೂದ್‌ ಪಾಶ, ರಿìಸ್ವಾಮಿ, ಗೌಸ ಪಾಶ, ಬಸವರಾಜ ಬುಕ್ಕಣ್ಣ ಇದ್ದರು.

ಪ್ರಧಾನಿ ಮೋದಿಯವರ ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ಪಾದಯಾತ್ರೆ ಕೈಗೊಂಡಿರುವ ಅಭಿಮಾನಿಗಳಿಗೆ ಪ್ರತಾಪಗೌಡ ಪಾಟೀಲ್‌ ಫೌಂಡೇಶನ್‌ ಅಧ್ಯಕ್ಷ ಪ್ರಸನ್ನ ಪಾಟೀಲ್‌ ಅವರು ಸನ್ಮಾನಿಸಿ ಕಿರು ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್‌ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next