Advertisement

Mobile phone theft case : ಅಂತರ್‌ ಜಿಲ್ಲಾ ಕಳ್ಳನ ಬಂಧನ

09:22 PM Aug 06, 2023 | Team Udayavani |

ಯಲ್ಲಾಪುರ: ಮೊಬೈಲ್‌ ದೋಚಿದ ಅಂತರ್‌ ಜಿಲ್ಲಾ ಕಳ್ಳನೊಬ್ಬನನ್ನು ಇಲ್ಲಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹಾವೇರಿ ರಾಣೆಬೆನ್ನೂರನ ಅರಾಪತ್‌ ಅಬ್ದುಲ್‌ ಅಜೀಮ್‌ ಸಾಲ ಅತ್ತಾರ್‌ ಬಂಧಿತ ಆರೋಪಿ.

ಈತ ಎರಡು ದಿನದ ಹಿಂದೆ ಮೊಬೈಲ್‌ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಈತನನ್ನು ಬಂಧಿಸಲಾಗಿದೆ.

ಈತ ಜಾವಗಲ್‌ನಲ್ಲಿ 2.20 ಲಕ್ಷ ಮೌಲ್ಯದ ಬೈಕ್‌ ಕದ್ದಿದ್ದ. ಅಲ್ಲದೇ ಹುಬ್ಬಳ್ಳಿ, ಚಿತ್ರದುರ್ಗ, ಚಿಕ್ಕಮಗಳೂರು, ಅಂಕೋಲಾ, ಹಾವೇರಿಗಳಲ್ಲಿ ಹಲವು ಕಳ್ಳತನದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

16,500 ರೂ. ಮೌಲ್ಯದ ಮೊಬೈಲ್‌ ಹಾಗೂ ಜಾವಗಲ್‌ನಲ್ಲಿ ಕದ್ದ 2.20 ಲಕ್ಷದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಸಿಪಿಐ ರಂಗನಾಥ ನೀಲಮ್ಮನವರ್‌ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ, ನಿರಂಜನ ಹೆಗಡೆ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್‌ ಶಫೀ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next