Advertisement

ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಗ್ರಾಹಕರಿಗೆ ಅವಶ್ಯಕ : ಆಲ್ಬರ್ಟ್‌ ಡಿ’ಸೋಜಾ

05:30 PM Dec 24, 2020 | Suhan S |

ಮುಂಬಯಿ, ಡಿ. 23: ಮೋಡೆಲ್‌ ಕೋ- ಆಪರೇಟಿವ್‌ ಬ್ಯಾಂಕ್‌ ಲಿ. ಯುಪಿಐ (ಯೂನಿಫೈಡ್‌ ಪೇಮೆಂಟ್ಸ್‌ ಇಂಟಫೇìಸ್‌) ಸೇವೆಯನ್ನು ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಮೂಲಕ ಪರಿಚಯಿಸಿದ್ದು, ಸಾಂತಾಕ್ರೂಜ್‌ ಕಲಿನಾ ಇಲ್ಲಿನ ಸಿಎಸ್‌ಟಿ ರಸ್ತೆಯ ಸೆಂಟ್ರಲ್‌ ಪ್ಲಾಜಾØ ಅಪಾರ್ಟ್‌ಮೆಂಟ್‌ನಲ್ಲಿನ ಬ್ಯಾಂಕ್‌ಆಡಳಿತ ಕಚೇರಿಯಲ್ಲಿ ಡಿ. 23ರಂದು ನಡೆದ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಇಂಟಫೇìಸ್‌ ಅನ್ನು ಮೋಡೆಲ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಅಧಿಕೃತವಾಗಿ ಉದ್ಘಾಟಿಸಿದರು.

Advertisement

ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಮಾತನಾಡಿ, ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮುದಾಯದ ಮುಂದಾಳುಗಳ ದೂರದೃಷ್ಟಿಯಿಂದ ದಿ ಮೆಂಗ್ಳೂರಿಯ ಕೆಥೋಲಿಕ್‌ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ನಿಯಮಿತ ಎಂದು ಸ್ಥಾಪನೆಗೊಂಡ ಈ ಸಹಕಾರಿ ಬ್ಯಾಂಕ್‌ ಗ್ರಾಹಕರ ಹೆಚ್ಚುವರಿ ಸೇವೆಗೆ ಡಿಜಿಟಲ್‌ ಬ್ಯಾಂಕಿಂಗ್‌ ಅನ್ನು ಸೇವಾರ್ಪಣೆಗೈದಿದೆ. ಇದು ಬ್ಯಾಂಕ್‌ನ ಅಭಿವೃದ್ಧಿಯ ಮುನ್ನಡೆಯಾಗಿದೆ. ದೇಶಾದ್ಯಂತದ ಪ್ರಮುಖ ಬ್ಯಾಂಕ್‌ಗಳು ನೀಡುವ ಸೇವೆಗಳಿಗೆ ಸಮನಾಗಿಸಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಸಿಕೊಂಡಿದೆ. ಯುಪಿಐ ಸುಗಮ, ಸುರಕ್ಷಿತ ಮತ್ತು ಗ್ರಾಹಕರ ವಹಿವಾಟು ವ್ಯವಸ್ಥೆಗೆ ಉಚಿತವಾಗಿದ್ದು, ಅದು ಸಣ್ಣ ಪ್ರಮಾಣದ ವಹಿವಾಟುಗಳನ್ನು ಸಹ ಸುಲಭವಾಗಿ ನಿಭಾಯಿಸಲಿದೆ. ಉಚಿತ ನಿಧಿ ವರ್ಗಾವಣೆ, ತ್ವರಿತ ವರ್ಗಾವಣೆ ಸೇವೆಯು ಹಗಲಿರುಳು ಲಭ್ಯಲಿದ್ದು, ಸಣ್ಣ ಖರೀದಿಗೆ ಉಪಯುಕ್ತ. ಸ್ವತಃ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಹಂಚಿಕೊಳ್ಳದೇ ಇದ್ದಲ್ಲಿ ಬ್ಯಾಂಕ್‌ ಖಾತೆಯ ಗೌಪ್ಯತೆಯೂ ಸುರಕ್ಷಿತವಾಗಿ ಇರುವುದು. ಕಾರ್ಡ್‌ ಸಂಖ್ಯೆ ಮತ್ತು ಸಿವಿವಿ ಅಗತ್ಯವಿಲ್ಲದೆ ಸೇವೆಗೆ ಬಳಸಬಹುದು. ಈ ಕಾರಣದಿಂದಲೇ ಗ್ರಾಹಕ‌ರು ಯುಪಿಐ ಆಯ್ಕೆ ಮಾಡಲಿಚ್ಛಿಸುತ್ತಾರೆ. ನಿಮ್ಮ ಅಭಿವೃದ್ಧಿ ಪಾಲುದಾರ ಅನ್ನುವ ಶ್ಲೋಗನ್‌ನಿಂದಲೇ ಕಾರ್ಯಾಚರಿಸುತ್ತಿರುವ ಮೋಡೆಲ್‌ ಬ್ಯಾಂಕ್‌ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಕ್ಷೇತ್ರದ ಆವಿಷ್ಕಾರಗಳನ್ನು ಆಯ್ದು ಮತ್ತು ಸೇವೆಗಳನ್ನು ನಿರಂತರವಾಗಿ ನವೀಕರಿಸುತ್ತಿದೆ. ಬ್ಯಾಂಕ್‌ನ ಗ್ರಾಹಕ ಕೇಂದ್ರಿತ ಸೇವೆಯನ್ನು ತನ್ನ 25 ಶಾಖೆಗಳಲ್ಲಿ ಒದಗಿಸಿ ದಕ್ಷ, ವೃತ್ತಿಪರ ಮತ್ತು ವಿನಯಶೀಲ ಸೇವೆಯೊಂದಿಗೆ ಕಾರ್ಯನಿರತವಾಗಿದೆ ಎಂದು ತಿಳಿಸಿದ ಅವರು, ನಾಡಿನ ಸಮಸ್ತ ಜನತೆಗೆ ಮತ್ತು ಬ್ಯಾಂಕ್‌ನ ಗ್ರಾಹಕರಿಗೆ ಕ್ರಿಸ್ಮಸ್‌ ಮತ್ತು ನೂತನ ವರ್ಷದ ಶುಭಾಶಯಗಳನ್ನು ಕೋರಿದರು.

ಭವಿಷ್ಯದ ಯೋಜನೆಗಳಿಗೆ ಮೋಡೆಲ್‌ ಬ್ಯಾಂಕ್‌ ಎಲ್ಲ ರೀತಿಗಳ ಸಹಕಾರ ನೀಡಲಿದ್ದು, 2021ರಲ್ಲಿ ಬ್ಯಾಂಕ್‌ ಹೆಚ್ಚಿನ ಆವಿಷ್ಕಾರಗಳನ್ನು ಮಾಡುವ ಭರವಸೆಯನ್ನು ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ನೀಡಿದರು. ಈ ಸಂದರ್ಭ ಬ್ಯಾಂಕ್‌ನ ನಿರ್ದೇಶಕರಾದ ವಿನ್ಸೆಂಟ್‌ ಮಥಾಯಸ್‌, ಅಬ್ರಹಾಂ ಕ್ಲೇಮೆಂಟ್‌ ಲೋಬೋ, ಲಾರೆನ್ಸ್‌ ಡಿ’ಸೋಜಾ, ನ್ಯಾಯವಾದಿ ಪಿಯುಸ್‌ ವಾಸ್‌, ಜೆರಾಲ್ಡ್‌ ಕಡೋìಜಾ ಹಾಗೂ ಬ್ಯಾಂಕ್‌ನ ಸಲಹಾ ಸದಸ್ಯ ವಿಲಿಯಂ ಎಲ್‌. ಡಿ’ಸೋಜಾ, ಪ್ರಧಾನ ಪ್ರಬಂಧಕ ಝೆನೊನ್‌ ಡಿ’ಕ್ರೂಜ್‌, ಸಹಾಯಕ ಪ್ರಧಾನ ಪ್ರಬಂಧಕರಾದ ಓಸೆxನ್‌ ಫೂನ್ಸೆಕಾ, ನರೇಶ್‌ ಠಾಕೂರ್‌, ರತ್ನಾಕರ್‌ ಶೆಟ್ಟಿ, ಹಿರಿಯ ಪ್ರಬಂಧಕ ವಿಜಯ್‌ ಚವ್ಹಾಣ್‌ ಮತ್ತು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

 

-ಚಿತ್ರ -ವರದಿ : ರೋನ್ಸ್‌  ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next