Advertisement
ಇದರಿಂದಾಗಿ ಹೊರವಲಯದ ಈಗಲ್ಟನ್ ರೆಸಾರ್ಟ್ನಿಂದ ಹೊರಟ ಕಾಂಗ್ರೆಸ್ ಶಾಸಕರು ಮತ್ತು ನಗರದ ಖಾಸಗಿ ಹೋಟೆಲ್ನಿಂದ ಹೊರಟ ಜೆಡಿಎಸ್ ಶಾಸಕರು ಎಚ್ಎಎಲ್ ವಿಮಾನ ನಿಲ್ದಾಣ ತಲುಪಿದರಾದರೂ ಕೊಚ್ಚಿಗೆ ತೆರಳಲು ಸಾಧ್ಯವಾಗದೆ ನಿರಾಶೆಯಿಂದ ವಾಪಸಾಗುವಂತಾಗಿದೆ.
Related Articles
Advertisement
ಈ ಮಧ್ಯೆ ಕೆಲ ಶಾಸಕರು ಕ್ಷೇತ್ರಕ್ಕೆ ಹೋಗಿ ಬರುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ಅವರನ್ನು ಹೊರಗೆ ಬಿಟ್ಟಿಲ್ಲ. ಇನ್ನು ಕೆಲವರು ಆರೋಗ್ಯ ಸಮಸ್ಯೆ ಇದೆ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದಿದ್ದರು. ಅವರಲ್ಲಿ ಕೆಲವರಿಗೆ ಮಾತ್ರ ವಿಶ್ವಾಸಾರ್ಹತೆಯ ಆಧಾರದಲ್ಲಿ ಹೊರಗೆ ಬಿಟ್ಟಿದ್ದಾರೆ ಎನ್ನಲಾಗಿದೆ. ಶಾಸಕರಿಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ್ದರು. ಆದರೆ, ರೆಸಾರ್ಟ್ನಲ್ಲಿ ಎಲ್ಲ ಶಾಸಕರ ಚಲನವಲನದ ಮೇಲೂ ನಿಗ ಇಡಲಾಗಿದೆ.
ಹುಮ್ನಾಬಾದ್ ಶಾಸಕ ಬಸವರಾಜ್ ಪಾಟೀಲ್ ಅವರು ಆರೋಗ್ಯ ಸಮಸ್ಯೆಯ ನೆಪವೊಡ್ಡಿ ರೆಸಾರ್ಟ್ನಿಂದ ಹೊರಗೆ ಹೋಗಿಬರಲು ಅವಕಾಶ ಕೇಳಿಕೊಂಡಿದ್ದರು. ಆಗ ಹಿರಿಯ ಶಾಸಕರಾದ ಕೆ.ಜೆ.ಜಾರ್ಜ್ ಅವರು ಬಸವರಾಜ್ ಪಾಟೀಲ್ ಅವರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಭದ್ರತೆ ಹಿಂಪಡೆದ ಸರ್ಕಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಾಹ್ನದ ವೇಳೆಗೆ ಈಗಲ್ಟನ್ ರೆಸಾರ್ಟ್ ಸಮೀಪದ ವಿಶೇಷ ಭದ್ರತೆಯನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಗೆ ಆದೇಶಿಸಿದ್ದರು. ಅದರಂತೆ ವಿಶೇಷ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ. ಜೆಡಿಎಸ್ ಶಾಸಕರಿಗೆ ನಿಖೀಲ್ ಕುಮಾರಸ್ವಾಮಿ ಸಾಥ್: ಬುಧವಾರದಿಂದ ನಗರದ ಖಾಸಗಿ ಹೋಟೆಲ್ನಲ್ಲಿ ತಂಗಿರುವ ಜೆಡಿಎಸ್ ಶಾಸಕರು ಕೂಡ ಕೇರಳದ ಕೊಚ್ಚಿಗೆ ಹೊರಟಿದ್ದು, ಕುಮಾರಸ್ವಾಮಿಯವರ ಸೂಚನೆ ಮೇರೆಗೆ ನಗರದ ಶಾಂಗ್ರಿಲಾ ಹೋಟೆಲ್ಗೆ ಆಗಮಿಸಿದ ನಿಖೀಲ್ ಶಾಸಕರ ಜೊತೆ ಪ್ರಯಾಣ ಬೆಳಸಿದರು. ಆದರೆ, ಅವರಿಗೂ ವಾಮಾನಯಾನದ ಅವಕಾಶ ಸಿಗಲಿಲ್ಲ. ಆರಂಭದಲ್ಲಿ ನಾವು ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ಆದರೆ, ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರಿಂದ ಅಷ್ಟು ದಿನ ಬೆಂಗಳೂರಿನಲ್ಲಿ ಶಾಸಕರನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಅಂತಿಮವಾಗಿ ಕಾಂಗ್ರೆಸ್ ಶಾಸಕರ ಜತೆಗೆ ಒಟ್ಟಾಗಿರಲು ಜೆಡಿಎಸ್ ಶಾಸಕರನ್ನೂ ಕೊಚ್ಚಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಕೊಚ್ಚಿಗೆ ತೆರಳಲು ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಸಿದ್ಧತೆ
ರಾಮನಗರ: ತಾಲೂಕಿನ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ನ ಚುನಾಯಿತ ಪ್ರತಿನಿಧಿಗಳಿಗೆ ಗುರುವಾರ ಬಿಡುವಿಲ್ಲದ ಚಟುವಟಿಕೆಯಲ್ಲಿದ್ದರು. ಗುರುವಾರ ರಾತ್ರಿ ಕೇರಳದ ಕೊಚ್ಚಿಗೆ ಹೋಗಲು ಸಿದ್ದತೆ ನಡೆಸಿದರು. ಗುರುವಾರ ಬೆಳಿಗ್ಗೆ ಬಸ್ಸುಗಳು ಮತ್ತು ಕಾರುಗಳಲ್ಲಿ ಬೆಂಗಳೂರಿನ ಕಡೆ ತೆರಳಿದ ಪ್ರತಿನಿಧಿಗಳು ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತದ ನಂತರ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ರೆಸಾರ್ಟ್ಗೆ ವಾಪಸ್ಸಾದರು. ನಂತರ ಕೆಲ ನಿಮಿಷಗಳಲ್ಲೇ ಹುಮ್ನಬಾದ್ ಕ್ಷೇತ್ರದ ಚುನಾಯಿತ ಪ್ರತಿನಿಧಿಗ ರಾಜಶೇಖರ್ ಕಾರಿನಲ್ಲಿ ರೆಸಾರ್ಟ್ನ ಗೇಟಿನ ಬಳಿ ಬಂದಾಗ ಅಲ್ಲಿ ಬಂದೋಬಸ್ತ್ಗೆ ನಿಯೋಜಿತರಾಗಿದ್ದ ಪೊಲಿಸರು ಅವರು ಹೊರಹೋಗುವುದನ್ನು ತಡೆದರು. ತಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದರಿಂದ ಬೆಂಗಳೂರಿಗೆ ಹೋಗಬೇಕಾಗಿದೆ ಎಂದರೂ ಪೊಲೀಸರು ಅವರನ್ನು ಹೊರಹೋಗಲು ಬಿಡಲಿಲ್ಲ. ಇದರಿಂದ ಕೋಪಗೊಂಡ ರಾಜಶೇಖರ್ ಪೊಲೀಸರ ವಿರುದ್ದ ಏರು ದನಿಯಲ್ಲಿ ಮಾತನಾಡಿದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಹೊರಹೋಗಲು ಸಹಕರಿಸಿದರು.
ರಾಮನಗರ: ಬಿ.ಎಸ್.ಯಡಿಯೂರಪ್ಪ ನೂತನ ಮುಖ್ಯಮಂತ್ರಿ ಆದ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಮೇಶ್ ಅವರ ವರ್ಗಾವಣೆಯಾಗಿದೆ. ಅವರ ಜಾಗಕ್ಕೆ ಕೆ.ಅಣ್ಣಾ ಮಲೈ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಟಿದೆ. ಚಿಕ್ಕಮಗಳೂರು ಎಸ್ಪಿಯಾಗಿದ್ದ ಕೆ.ಅಣ್ಣಾ ಮಲೈ ಅವರನ್ನು ರಾಮನಗರದ ಎಸ್ಪಿ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.
ಬಿಜೆಪಿ ಪ್ರಜಾಪ್ರಭುತ್ವ ವಿರುದ್ಧ
ರಾಮನಗರ: ಸರ್ಕಾರ ರಚನೆಗೆ ಬೇಕಾದ ಅಗತ್ಯ ಸಂಖ್ಯೆ ಇಲ್ಲದ ಬಿಜೆಪಿ ಅನ್ಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳನ್ನು ಸೆಳೆಯಲು ಮುಂದಾಗಿದೆ. ಈ ಪ್ರಯತ್ನ ಪ್ರಜಾಪ್ರಭುತ್ವ ತತ್ವಗಳ ವಿರುದ್ದವಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ತಮ್ಮ ಪಕ್ಷ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ಸುಪ್ರಿಂ ಕೋರ್ಟಿನಲ್ಲಿ ತೀರ್ಮಾನ ಹೊರ ಬಿದ್ದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಜೆಪಿಯವರಂತೆ ನಾವು ಕಚಡ ರಾಜಕಾರಣ ಮಾಡುವುದಿಲ್ಲ ಎಂದರು. ಬಿಜೆಪಿಯ 6 ಪ್ರತಿನಿಧಿಗಳು ಕಾಂಗ್ರೆಸ್ ಸಂಪರ್ಕದಲ್ಲಿರುವುದರ ಬಗ್ಗೆ ತಮ್ಮ ಬದಿ ಮಾಹಿತಿ ಇಲ್ಲ ಎಂದರು. ತಮ್ಮ ಪಕ್ಷಕ್ಕೆ ಯಾವ ಆಪರೇಷನ್ನ ಅಗತ್ಯವಿಲ್ಲ ಎಂದರು.
ರಾಮನಗರ: ಸರ್ಕಾರ ರಚನೆಗೆ ಬೇಕಾದಷ್ಟು ಸದಸ್ಯರ ಬೆಂಬಲ ಇಲ್ಲದ ಬಿ.ಎಸ್.ಯಡಿಯೂರಪ್ಪ ವಿಚಲಿತರಾಗಿದ್ದಾರೆ. ಅಗತ್ಯವಾದಷ್ಟು ಸಂಖ್ಯಾಬಲ ಹೊಂದಿಸಿಕೊಳ್ಳಲು ಪ್ರಯತ್ನಸುತ್ತಿದ್ದಾರೆ. ಹೀಗಾಗಿಯೇ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಂತಹ ಕ್ರಮಗಳಿಗೆ ಮುಂದಾಗಿದ್ಧಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ರೆಸಾರ್ಟ್ನಲ್ಲಿ ಕಾಂಗ್ರೆಸ್ ಪಕ್ಷ ರಕ್ಷಣೆ ಕೋರಿರಲಿಲ್ಲ. ರೆಸಾರ್ಟ್ನಲ್ಲಿ ಕಾಂಗ್ರೆಸ್ನ ಚುನಾಯಿತ ಪ್ರತಿನಿಧಿಗಳು, ಎಂ.ಎಲ್.ಸಿ.ಗಳು, ಸಂಸದರು, ಪ್ರಮುಖರು ಸೇರಿದಂತೆ ಸುಮಾರು 150 ಮಂದಿ ಇದ್ದಾರೆ. ಹೀಗಾಗಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರಷ್ಟೆ. ಇಲ್ಲಿ ಬಂದೋಬಸ್ತ್ ಕಲ್ಪಿಸಿದ್ದ ಜಿಲ್ಲಾ ಎಸ್ಪಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂದರು. ಕಾಂಗ್ರೆಸ್ ಟಿಕೆಟ್ ಮೇಲೆ ಚುನಾಯಿತರಾಗಿರುವ ಪ್ರತಿನಿಧಿಗಳ ಮೇಲೆ ಒತ್ತಡಗಳಿವೆ. ಬಿಜೆಪಿಯವರು ಆಪರೇಷನ್ ನಡೆಸಲು ಮುಂದಾಗಿದ್ದಾರೆ. ಜನಾರ್ಧನರೆಡ್ಡಿ ಆಪ್ತರು ಹಾಗೂ ಬೇರೆಯವರ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಹುನ್ನಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್ನ ಯಾವ ಪ್ರತಿನಿಧಿಯೂ ಅತ್ತ ಹೋಗೋಲ್ಲ ಎಂದರು. ಕಾಂಗ್ರೆಸ್ – ಜೆಡಿಎಸ್ ನಲ್ಲಿ ಬಲವಿದೆ. ಇಬ್ಬರು ಸೇರಿ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ಎರಡೂ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಒಗ್ಗಟ್ಟಿನಿಂದ ಇರ್ತೇವೆ ಎಂದರು. ಈಗಲ್ಟನ್ ರೆಸಾರ್ಟ್ನಿಂದ ಬೇರೆಡೆಗೆ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ°ಗೆ ಪ್ರತಿಕ್ರಿಯಿಸಿದ ಅವರು ತಮಿಳುನಾಡು, ಹೈದರಾಬಾದ್ಗೆ ಬರುವಂತೆ ಆಹ್ವಾನ ಬಂದಿದೆ. ವಿಮಾನ ಲಭ್ಯತೆ ಮುಂತಾದ ವಿಚಾರಗಳನ್ನು ತಿಳಿದುಕೊಂಡು ನಂತರ ನಿಧ್ರಿಸುವುದಾಗಿ ಅವರು ತಿಳಿಸಿದ್ದಾರೆ.