Advertisement

Ideological ಭಿನ್ನಾಭಿಪ್ರಾಯ: ಮನೆ ತೊರೆದ ಬಿಎಸ್ಪಿ ಅಭ್ಯರ್ಥಿ ಕಂಕರ್‌

01:26 AM Apr 07, 2024 | Team Udayavani |

ಬಾಲಾಘಾಟ್‌: ಕಾಂಗ್ರೆಸ್‌ ಶಾಸಕಿಯೂ ಆಗಿರುವ ಪತ್ನಿ ಜತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಬಾಲಾಘಾಟ್‌ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಕಂಕರ್‌ ಮುಂಜಾರೆ ಮನೆ ಯನ್ನು ತೊರೆದಿದ್ದಾರೆ.

Advertisement

ಭಿನ್ನ ಅಭಿಪ್ರಾಯದ ಇಬ್ಬರು ಚುನಾವಣೆ ಸಂದರ್ಭದಲ್ಲಿ ಒಂದೇ ಮನೆಯಲ್ಲಿ ಖಂಡಿತಾ ಇರಬಾರದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕಂಕರ್‌ ಮುಂಜಾರೆ ಮಾಜಿ ಶಾಸಕ, ಮಾಜಿ ಲೋಕಸಭಾ ಸದಸ್ಯರು ಕೂಡ ಹೌದು. ಅವರ ಪತ್ನಿ ಅನುಭಾ ಮುಂಜಾರೆ ಕಳೆದ ನವೆಂಬರ್‌ನಲ್ಲಿ ಕಾಂಗ್ರೆಸ್‌ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಾನು ಮನೆ ಯನ್ನು ತೊರೆದಿದ್ದು ಡ್ಯಾಮ್‌ ಬಳಿ ಗುಡಿಸಲಿನಲ್ಲಿ ವಾಸವಿ ರುತ್ತೇನೆ. ಎ.19ರಂದು ಮತ ದಾನ ಮುಗಿದ ಬಳಿಕ ಮನೆಗೆ ಮರುಳುತ್ತೇನೆ. ಎರಡು ಪಕ್ಷದ ಇಬ್ಬರು ಒಂದೇ ಮನೆಯಲ್ಲಿ ಇದ್ದರೆ
ಜನರು ಮ್ಯಾಚ್‌ಫಿಕ್ಸಿಂಗ್‌ ಎಂದು ತಿಳಿದಿ ಕೊಳ್ಳಬಹುದು ಎಂದು ಕಂಕರ್‌ ಮುಂಜಾರೆ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next