Advertisement

ಭೂ ಸ್ವಾಧೀನ ಸಂತ್ರಸ್ತರೊಂದಿಗೆ ಶಾಸಕರ ಸಭೆ

01:00 AM Feb 25, 2019 | Harsha Rao |

ಮಣಿಪಾಲ: ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ ರಸ್ತೆಯ ವಿಸ್ತರೀಕರಣಕ್ಕೆ ಸಂಬಂಧಿಸಿದಂತೆ ಭೂ-ಸ್ವಾಧೀನಕ್ಕೊಳಪಡುವ ಭೂ ಸಂತ್ರಸ್ತರ ಸಭೆ ಶಾಸಕರಾದ ಕೆ. ರಘುಪತಿ ಭಟ್‌  ಅಧ್ಯಕ್ಷತೆಯಲ್ಲಿ ಉಡುಪಿ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ  ಜರಗಿತು.

Advertisement

ಉಡುಪಿ ತಾಲೂಕು ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಲೋಕೋ ಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಚಂದ್ರಶೇಖರ್‌,  ಸಹಾಯಕ ಕಾರ್ಯಪಾಲಕ ಅಭಿಯಂತ ಜಗದೀಶ್‌ ಭಟ್‌, ಗ್ರಾಮ ಕರಣಿಕರು, ಸರ್ವೇಯರ್‌  ಉಪಸ್ಥಿತರಿದ್ದರು. 

ಉಡುಪಿ ತಾಲೂಕಿನ ಅಂಬಾಗಿಲು, ಮಣಿಪಾಲ ರಸ್ತೆಗೆ 2ನೇ ಹಂತದಲ್ಲಿ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರಸ್ತೆ ಮಧ್ಯೆ 2 ಬದಿ 11 ಮೀ ಅಗಲದ ಒಟ್ಟು 22 ಮೀ ಅಗಲದ ಚತುಷ್ಪಥ ರಸ್ತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 

ಭೂ ಮಾಲಕರಿಗೆ ಉಪ ನೊಂದಣಾ ಧಿಕಾರಿ ಕಚೇರಿಯಲ್ಲಿ ಹೊಸದಾಗಿ ಪ್ರಕಟಗೊಂಡ ದರ ಪಟ್ಟಿಯಂತೆ ಭೂ ಮೌಲ್ಯ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next