Advertisement

ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಶಾಸಕ

11:59 AM Oct 17, 2017 | Team Udayavani |

ಕೆ.ಆರ್‌.ಪುರ: ಇತ್ತಿಚೆಗೆ ಸುರಿದ ಭಾರಿ ಮಳೆಗೆ ಹೆಣ್ಣೂರು ಬಾಗಲೂರು ರಸ್ತೆಯ ಗೆದ್ದಲಹಳ್ಳಿ ರೈಲ್ವೆ ಸೇತುವೆ ಸಮೀಪ ಎತೇಚ್ಚವಾಗಿ ನೀರು ಸಂಗ್ರಹವಾಗಿ ವಾಹನ ಸಂಚಾರ ಅಸ್ಥವ್ಯಸ್ಥವಾಗಿದ್ದು ಸೋಮವಾರ ಶಾಸಕ ಬಿ.ಎ.ಬಸವರಾಜ ಖುದ್ದು ನೀರು ತೆರವು ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

Advertisement

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಗೆದ್ದಲಹಳ್ಳಿಯಲ್ಲಿ ಹಾದು ಹೋಗಿರುವ ಮುಖ್ಯರಸ್ತೆಯಲ್ಲಿ ಗುಂಡಿಗಳು ಹೆಚ್ಚಿದ್ದು, ಪಕ್ಕದಲ್ಲೇ  ಎಸ್‌ಟಿಪಿ ಪ್ಲಾಂಟ್‌ಗಳಿಗೆ ನೀರು ಹರಿಯುವ ದೊಡ್ಡದಾದ ರಾಜಕಾಲುವೆ ಇದೆ, ನಿರಂತರ ಮಳೆಯಿಂದ ಹೆಚ್ಚು ಪ್ರಮಾಣದ ನೀರು ರಸ್ತೆಯಲ್ಲೇ ಸಂಗ್ರಹವಾಗಿ ವಾಹನ  ಸವಾರರಿಗೆ ತೀವ್ರ ತೊಂದರೆಯಾಗುತ್ತಿತ್ತು.

ಇದನ್ನು ಮನಗಂಡ ಶಾಸಕರು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6ರವೆಗೂ ಸ್ಥಳದಲ್ಲೇ ಹಾಜರಿದ್ದು ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಯೋಗದಲ್ಲಿ ನೀರನ್ನು ತೆರವು ಮಾಡಿದ್ದಲ್ಲದೆ, ಮತ್ತೆ ನೀರು ಸಂಗ್ರವಾಗದಂತೆ ಜಲ್ಲಿ ಸುರಿದು ಸಮತಟ್ಟು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನೇಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next