Advertisement

ವ್ಹೀಲ್‌ಚೇರ್‌ನಲ್ಲಿ ಬಂದ ಶಾಸಕ ಶ್ರೀನಿವಾಸಮೂರ್ತಿ

11:51 AM May 26, 2018 | Team Udayavani |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ನೆಲಮಂಗಲ ಕ್ಷೇತ್ರದ ಜೆಡಿಎಸ್‌ ಶಾಸಕ ಡಾ.ಶ್ರೀನಿವಾಸಮೂರ್ತಿ ಶುಕ್ರವಾರ ವಿಶ್ವಾಸಮತ ಕಲಾಪಕ್ಕೆ ವಿಧಾನಸಭೆಗೆ ವ್ಹೀಲ್‌ ಚೇರ್‌ನಲ್ಲೇ ಬಂದಿದ್ದರು.

Advertisement

ವಿಶ್ವಾಸಮತ ಯಾಚನೆ ವೇಳೆ ಎಲ್ಲ ಶಾಸಕರು ಹಾಜರಿರುವಂತೆ ಸೂಚನೆ ನೀಡಲಾಗಿತ್ತಲ್ಲದೆ, ವಿಪ್‌ ಕೂಡ ಜಾರಿ ಮಾಡಲಾಗಿತ್ತು. ಹೀಗಾಗಿ ಶ್ರೀನಿವಾಸಮೂರ್ತಿ ಅವರು ವ್ಹೀಲ್‌ ಚೇರ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.

ವಿಧಾನಸೌಧದ ಆವರಣದಿಂದ ಇತರೆ ಶಾಸಕರು ಮತ್ತು ಮಾರ್ಷಲ್‌ಗ‌ಳು ಅವರನ್ನು ವ್ಹೀಲ್‌ಚೇರ್‌ನಲ್ಲೇ ತಳ್ಳಿಕೊಂಡು ವಿಧಾನಸಭೆ ಒಳಗೆ ಕರೆತಂದರು. ಕಲಾಪ ಆರಂಭವಾದಾಗಿನಿಂದ ಮುಗಿಯುವವರೆಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವಿನ ಖಾಲಿ ಜಾಗದಲ್ಲಿ ವ್ಹೀಲ್‌ ಚೇರ್‌ನಲ್ಲೇ ಅವರು ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next