Advertisement

ಎಚ್‌ಡಿಡಿ ಹೊಗಳುವ ಭರದಲ್ಲಿ ಜೆಡಿಎಸ್‌ ಶಾಸಕ ಎಡವಟ್ಟು!

02:51 PM Dec 05, 2017 | |

ಕೊರಟಗೆರೆ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡರ ಗುಣಗಾನ ಮಾಡುವ ಭರದಲ್ಲಿ ಮನಸೋ ಇಚ್ಛೆ ನಾಲಿಗೆ ಹರಿಬಿಡುವ ಮೂಲಕ ಗುಬ್ಬಿ ಶಾಸಕ ಶ್ರೀನಿವಾಸ್‌ ದೇವೇಗೌಡರ ಸಮ್ಮುಖದಲ್ಲೇ ಎಡವಟ್ಟು ಮಾಡಿಗೊಂಡಿದ್ದಾರೆ.

Advertisement

 ಕೊರಟಗೆರೆ ಪಟ್ಟಣದಲ್ಲಿ ಜೆಡಿಎಸ್‌ ಏರ್ಪಡಿಸಿದ್ದ ಮನೆ-ಮನೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮಾತನಾಡಲು ನಿಂತ ಗುಬ್ಬಿ ಶಾಸಕ ಶ್ರೀನಿವಾಸ್‌, ಎಲ್ಲಾ ಮಾಜಿ ಪ್ರಧಾನಿಗಳು ತಿಂದು ಬಿಳಿ ಆನೆಗಳಂತಾಗಿದ್ದಾರೆ. ಆದರೆ, ದೇವೇಗೌಡರು ಹುಚ್ಚುನಾಯಿಯಂತೆ ದೇಶ ಸುತ್ತಿ ಸೇವೆ ಮಾಡಿ ಪಕ್ಷ ಕಟ್ಟಲು ತಿರುಗುತ್ತಿದ್ದಾರೆ ಎಂದು ದೇವೇಗೌಡರ ಸಮ್ಮಖದಲ್ಲೇ ಆಕ್ಷೇಪಾರ್ಹ ಪದ ಬಳಸಿ ಭಾಷಣ ಮಾಡಿದ್ದಾರೆ. 

ಇನ್ನು ಇದೇ ವೇಳೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ರಾಜ್ಯದ ದೊಡ್ಡಕಳ್ಳರು ಎಂದು ಜರಿದಿರುವ ಅವರು,ಡಾ.ಜಿ.ಪರಮೇಶ್ವರ್‌ ಒಬ್ಬ ವೈಟ್‌ ಕಾಲರ್‌ ರಾಜಕಾರಣಿ ಎಂದೂ ವಾಗ್ಧಾಳಿ ನಡೆಸಿದರು .

Advertisement

Udayavani is now on Telegram. Click here to join our channel and stay updated with the latest news.

Next