Advertisement

ಜಿ.ಟಿ.ದೇವೆಗೌಡ ಕುಟುಂಬಕ್ಕೆ ಬಹಿರಂಗ ಆಫರ್ ಕೊಟ್ಟ ಶಾಸಕ ಸಾ.ರಾ.ಮಹೇಶ್

02:09 PM Apr 29, 2022 | Team Udayavani |

ಮೈಸೂರು: ಒಂದು ವೇಳೆ ಜಿ.ಟಿ.ದೇವೆಗೌಡ ಮತ್ತು ಅವರ ಮಗ ಜೆಡಿಎಸ್ ಪಕ್ಷದಲ್ಲೇ ಉಳಿಯುವುದಾದರೆ ಅವರಿಬ್ಬರಿಗೂ ಟಿಕೆಟ್ ಕೊಡಿಸುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಅವರು ಬಹಿರಂಗ ಆಫರ್ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಕ್ಷದಲ್ಲೇ ಉಳಿಯುವುದಾದರೆ ನಾನೆ ವರಿಷ್ಠರ ಜೊತೆ ಮಾತನಾಡುತ್ತೇನೆ. ಚಾಮುಂಡೇಶ್ವರಿಯಲ್ಲಿ ಅವರೇ ಶಾಸಕರಿದ್ದಾರೆ. ಹುಣಸೂರಿನಲ್ಲಿ ನಮ್ಮ ಪರಾಜಿತ ಅಭ್ಯರ್ಥಿ ಸೋಮಶೇಖರ್ ಸಂಘಟನೆ ಮಾಡುತ್ತಿದ್ದಾರೆ. ಜಿಟಿಡಿ ಪುತ್ರ ಸ್ಪರ್ಧಿಸುವುದಾದರೆ ಸೋಮಶೇಖರ್ ಮನವೊಲಿಸುತ್ತೇನೆ. ಪಕ್ಷದ ನಮ್ಮ ನಾಯಕರ ಮನವೊಲಿಸಿ ಟಿಕೆಟ್ ಕೊಡಿಸುತ್ತೇನೆ‌ ಎಂದರು.

ಸಾಮಾನ್ಯ ಕಾರ್ಯಕರ್ತನೂ ಸೋಲಿಸುತ್ತಾನೆ: ಜೆಡಿಎಸ್‌ ಮೈಸೂರು ಭಾಗದಲ್ಲಿ ಒಂದು ಸ್ಥಾನ ಗೆಲ್ಲುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಭಾಗದಲ್ಲಿ ಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲವೆಂದು ನಮ್ಮ‌ ಮೈಸೂರು ನಾಯಕರು ಹೇಳಿದ್ದಾರೆ. ಮೊದಲು ನಿಮ್ಮ ಕ್ಷೇತ್ರ ಯಾವುದು ಹೇಳಿ? ಐದು ವರ್ಷ ಪೂರೈಸಿದ ಮುಖ್ಯಮಂತ್ರಿಯಾಗಿದ್ದವರು ತಮ್ಮ ಯಾವ ಕ್ಷೇತ್ರವೆಂದು ಹೇಳುತ್ತಿಲ್ಲ ಎಂದು ಟಾಂಗ್‌ ನೀಡಿದರು.

ಇದನ್ನೂ ಓದಿ:ಅಜಯ್ ದೇವಗನ್ ಟ್ವೀಟ್ ಅಕ್ಷಮ್ಯ ಅಪರಾಧ : ಸಂಸದ ಪ್ರತಾಪ್ ಸಿಂಹ

ನಿಮ್ಮ ವಿರುದ್ದ ಸ್ಪರ್ಧೆಗೆ ನಮ್ಮ ಯಾವ ದೊಡ್ಡ ನಾಯಕರೂ ಬೇಡ. ಕುಮಾರಸ್ವಾಮಿಯೂ ಬೇಡ, ನಮ್ಮ ಜಿ.ಟಿ.ದೇವೆಗೌಡರೂ ಬೇಡ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆಲ್ಲಿಸುತ್ತೇವೆ. ನಿಮ್ಮ ಕ್ಷೇತ್ರ ಯಾವುದೆಂದು ಹೇಳದೆ ಏನೇನೊ ಮಾತನಾಡುತ್ತೀರಿ? ಇಷ್ಟು ವರ್ಷ ಅನುಭವ ಇದೆ, ಜೆಡಿಎಸ್ ಬಗ್ಗೆ ಏನು ಮಾತನಾಡಬೇಕೆಂದು ಗೊತ್ತಿಲ್ವ. ನೀವು ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಪಕ್ಷ, ಕಾರ್ಯಕರ್ತರ ಶ್ರಮವಿದೆ ಎಂದು ಮರೆಯಬೇಡಿ ಎಂದು ಸಿದ್ದರಾಮಯ್ಯ ವಿರುದ್ದ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next