Advertisement

ಕಂಬಕ್ಕೆ ಡಿಕ್ಕಿ ಹೊಡೆದ ಶಾಸಕ ರವೀಂದ್ರನಾಥ್ ಮೊಮ್ಮಗನ ಕಾರು : ತಪ್ಪಿದ ಭಾರೀ‌ ದುರಂತ

10:00 AM Feb 25, 2020 | Team Udayavani |

ದಾವಣಗೆರೆ: ಶಾಸಕ ಎಸ್ ಎ. ರವೀಂದ್ರನಾಥ್ ಮೊಮ್ಮಗ ಅರುಣಕುಮಾರ ಅವರ ಕಾರು ರವಿವಾರ ತಡರಾತ್ರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯ ನಂತರ ಅರುಣ್ ಕುಮಾರ ಕಾರನ್ನು ಸ್ಥಳದಲ್ಲಿ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.

Advertisement

ದಾವಣಗೆರೆ ನಗರದ ಹೊರವಲಯದ ಶಾಮನೂರನಲ್ಲಿ ಘಟನೆ ನಡೆದಿದ್ದು, ಕಾರು ವಿದ್ಯುತ್ ಕಂಬಕ್ಕೆ ಹೊಡೆದು ಅದು ಮುರಿದು ನಂತರ ಮನೆಗೆ ಢಿಕ್ಕಿಯಾಗಿದೆ. ಘಟನೆಯ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಶಾಸಕರ ಮೊಮ್ಮಗ ಅರುಣಕುಮಾರ ಹಲ್ಲೆ ಗೆ ಮುಂದಾಗಿದ್ದರು ಎನ್ನಲಾಗಿದೆ.

ಅರುಣಕುಮಾರ ಅವರು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ. ರವೀಂದ್ರನಾಥ್ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಪುತ್ರ.

ಘಟನೆಯ ಬಗ್ಗೆ ಸ್ಥಳೀಯರು ತೀವ್ರ ವಿರೋಧ ಮಾಡಿದ ಹಿನ್ನೆಲೆ ಅರುಣಕುಮಾರ ಅವರು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದಾರೆ. ಆದರೆ ಕಾರಿನಲ್ಲಿ ಶಾಸಕ ರವೀಂದ್ರನಾಥ್ ಅವರ ಪಾಸ್ ಪತ್ತೆಯಾಗಿದೆ.

ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಅರುಣ ಕುಮಾರ ಅವರನ್ನು ಕರೆಸುವಂತೆ ಆಗ್ರಹ ಮಾಡುತ್ತಿದ್ದಾರೆ.

Advertisement

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next