Advertisement

MLA: ಶಾಲಾ ಮಕ್ಕಳಿಗೆ ಸಮವಸ್ತ್ರ ಶೂ,ಪುಸ್ತಕ ಕೊಡುವುದು ನಮ್ಮ ಕಮಿಷನ್ ಗಾಗಿ; ಶಾಸಕ ರಾಜು ಕಾಗೆ

12:57 PM Dec 27, 2023 | Team Udayavani |

ಬೆಳಗಾವಿ:  ರಾಜಕಾರಣ ಸಂಪೂರ್ಣ ಕೆಟ್ಟುಹೋಗಿದೆ. ರಾಜಕಾರಣಿಗಳು ಪವಿತ್ರರಲ್ಲ. ಶಾಲಾ ಮಕ್ಕಳಿಗೆ ಸಮವಸ್ತ್ರ ಶೂ ಹಾಗೂ ಪುಸ್ತಕ ಕೊಡುವುದು ನಮ್ಮ ಕಮಿಷನ್ ಗಾಗಿ. ನಮ್ಮ ಬಗ್ಗೆ ಹೇಳುತ್ತ ಹೋದರೆ ನಿಮಗೆ ನಮ್ಮ ಬಗೆಗೆ ಇರುವ ಗೌರವ ಉಳಿಯುವುದಿಲ್ಲ. ಜಗತ್ತಿನಲ್ಲಿ ದರೋಡೆಕೋರರು ತುಡುಗರು ಲೂಟಿಕೋರರು ಇದ್ದರೆ ಅದು ರಾಜಕಾರಣಿಗಳು ಎಂದು ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಬೆಳಗಾವಿ ಖಾಸಗಿ ಶಾಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾ  ಇಂತಹ ವೇದಿಕೆಯಲ್ಲಿ ನಾವು ಮಾತನಾಡಬಾರದು. ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತಾಗುತ್ತದೆ. ಶ್ರೀಗಳ ಜೊತೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ. ನಮ್ಮನ್ನು ಹಿತ್ತಿಲ ಬಾಗಿಲಿನಿಂದ ಕರೆದುಕೊಂಡು ಬನ್ನಿ.ಅಷ್ಟರಮಟ್ಟಿಗೆ ಈಗ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಾವೆಲ್ಲರೂ ಶುದ್ದರಿಲ್ಲ, ಪವಿತ್ರವಿಲ್ಲವೆಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next