Advertisement

Govt., ಡೆಂಗ್ಯೂ ತಡೆಯಿರಿ: ಶಾಸಕ ಡಾ| ಧನಂಜಯ ಸರ್ಜಿ ಆಗ್ರಹ

11:27 PM Jul 25, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸಲು ಸರಕಾರ ಮಸ್ಕಿಟೋ ರೆಪಲೆಂಟ್‌ ಗಳನ್ನು ವಿತರಿಸಬೇಕು ಶಾಸಕ ಡಾ| ಧನಂಜಯ ಸರ್ಜಿ ಆಗ್ರಹಿಸಿದ್ದಾರೆ.

Advertisement

ವಿಧಾನ ಪರಿಷತ್‌ ಕಲಾಪದಲ್ಲಿ ಮಂಗಳವಾರ ಪಾಲ್ಗೊಂಡ ಬಿಜೆಪಿಯ ಶಾಸಕ ಡಾ| ಧನಂಜಯ ಸರ್ಜಿ ಮಾತನಾಡಿ, ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹಾಗೂ ಸಾವುಗಳು ಹೆಚ್ಚಾಗುತ್ತಿವೆ. ಆದರೆ ಆರೋಗ್ಯ ಇಲಾಖೆ ನೀಡುತ್ತಿರುವ ವರದಿಗಳಲ್ಲಿ ತಪ್ಪಾಗಿ ಅಂಕಿ ಅಂಶಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇದುವರೆಗೆ ಎಷ್ಟು ಮಸ್ಕಿಟೋ ರೆಪಲೆಂಟ್‌ ಖರೀದಿ ಸಲಾಗಿದೆ ಹಾಗೂ ರೋಗಿಗಳಿಗೆ ವಿತರಿಸಿರುವುದು ಎಷ್ಟು ಎಂಬ ಮಾಹಿತಿ ಕೇಳಿದ ಅವರು, ಡೆಂಗ್ಯೂ ಪೀಡಿತ ವ್ಯಕ್ತಿಗೆ ಮೊದಲು ವೈಯಕ್ತಿಕ ರಕ್ಷಣೆ ಒದಗಿಸಬೇಕು. ಈ ನಿಟ್ಟಿನಲ್ಲಿ ಸೊಳ್ಳೆ ಪರದೆ ಅಥವಾ ಮಸ್ಕಿಟೋ ರೆಪಲೆಂಟ್‌ ಅನ್ನು ಬೆಳಗ್ಗೆ ಮತ್ತು ಸಂಜೆ ಹಚ್ಚಿಕೊಳ್ಳಬೇಕು, ಮಸ್ಕಿಟೋ ರೆಪಲೆಂಟ್‌ ಹಚ್ಚಿಕೊಳ್ಳುವುದರಿಂದ ಡೆಂಗ್ಯೂ ಪೀಡಿತ ವ್ಯಕ್ತಿಗೆ ಸೊಳ್ಳೆಗಳು ಕಚ್ಚುವುದಿಲ್ಲ, ಆಗ ಸೋಂಕು ಹರಡು ವುದು ಕಡಿಮೆಯಾಗುತ್ತದೆ ಎಂದರು.

ಡೆಂಗ್ಯೂ ಬಾಧಿತರಿಗೆ 10ರಿಂದ 14 ದಿನಗಳ ವರೆಗೂ ಕಡ್ಡಾಯವಾಗಿ ಮಸ್ಕಿಟೋ ರೆಪಲೆಂಟ್‌ ಹಚ್ಚಿಕೊಳ್ಳುವಂತೆ ಸಲಹೆ ನೀಡಿದರು. ಸಚಿವ ದಿನೇಶ್‌ ಗುಂಡೂರಾವ್‌ ಡಾ| ಸರ್ಜಿ ಅವರ ಸಲಹೆ ಸೂಕ್ತವಿದೆ. ಇದನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮ ಕೈ ಕೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next