Advertisement

ಶಾಸಕ ರಾಜುಗೌಡಗೆ ಮಾತೃ ವಿಯೋಗ

10:43 PM Jan 13, 2020 | Lakshmi GovindaRaj |

ನಾರಾಯಣಪುರ: ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುರಪುರ ಕ್ಷೇತ್ರದ ಶಾಸಕ ನರಸಿಂಹನಾಯಕ (ರಾಜುಗೌಡ) ಅವರ ತಾಯಿ ತಿಮ್ಮಮ್ಮ ಶಂಭನ ಗೌಡ (64) ಸೋಮವಾರ ಚಿಕಿತ್ಸೆ ಫ‌ಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಮೃತರು ಪತಿ, ನಿವೃತ್ತ ಅಬಕಾರಿ ಡಿವೈಎಸ್‌ಪಿ ಶಂಭನಗೌಡ ಪಾಟೀಲ, ಪುತ್ರರಾದ ಸುರಪುರ ಶಾಸಕ ರಾಜುಗೌಡ, ಆರ್‌ಟಿಜೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಣಮಂತನಾಯಕ (ಬಬಲುಗೌಡ) ಹಾಗೂ ಪುತ್ರಿ ಚೈತ್ರಾ ಸೇರಿ ಬಂಧುಗಳನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ 12:30ಕ್ಕೆ ಸ್ವಗ್ರಾಮ ಕೊಡೇಕಲ್‌ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಿಮ್ಮಮ್ಮ ಶಂಭನಗೌಡ ನಿಧನಕ್ಕೆ ಹುಣಸಿಹೊಳೆ ಕಣ್ವಮಠ ಶ್ರೀ ವಿದ್ಯಾಕಣ್ವ ವಿರಾಜತೀರ್ಥರು, ಸ್ಥಳೀಯ ಮಹಲಿನಮಠದ ಪೀಠಾಧಿ ಪತಿ ವೃಷಬೇಂದ್ರ ಅಪ್ಪ, ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ದೇವಪುರ ಶ್ರೀ, ಕಕ್ಕೇರಾ ಶ್ರೀ, ಗುಳಬಾಳ ಶ್ರೀ, ಶಿವಶರಣೆಯರಾದ ಸಾತಮ್ಮ ತಾಯಿ ಸೇರಿದಂತೆ ಮಠಾಧೀಶರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next