Advertisement

ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಜನಸ್ಪಂದನ ಕಾರ್ಯಕ್ರಮ

06:07 PM Mar 15, 2021 | Team Udayavani |

ಕಲಬುರಗಿ : ತಾತ- ಮುತ್ತಾತನ ಹೆಸರಿನಲ್ಲಿದ್ದ ಭೂಮಿ ತಮ್ಮ ಹೆಸರಿಗೆ ಹಕ್ಕು ಪತ್ರ ವರ್ಗಾವಣೆಯಾಗದಿದ್ದಕ್ಕೆ ನಮಗೆ ಎಲ್ಲೂ ನಯಾ ಪೈಸೆ ಸಾಲ ತೆಗೆದುಕೊಳ್ಳಲಿಕ್ಕೆ ಸಾಧ್ಯವಾಗಿರಲಿಲ್ಲ. ಅದೇ ರೀತಿ ಸರ್ಕಾರದ ಯಾವೊಂದು ಯೋಜನೆ ಲಾಭ ಪಡೆದುಕೊಳ್ಳಲಿಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೆ ಈಗ ಸಾಧ್ಯವಾಗಿರುವುದು ಹೊಸದಾಗಿ ಜಮೀನು ಖರೀದಿ ಮಾಡಿರುವಷ್ಟು ಖುಷಿಯಾಗಿದೆ.

Advertisement

ಇದು ಸೇಡಂ ತಾಲೂಕಿನ ಮುಧೋಳದಲ್ಲಿ  ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ನಡೆಸಿದ ಜನಸ್ಪಂದನದಲ್ಲಿ ಎರಡ್ಮೂರು  ದಶಕಗಳಿಂದ ತಮ್ಮ ಹೆಸರಿಗೆ ಆಗದಿರುವ ಜಮೀನು ತಮ್ಮ ಹೆಸರಿಗಾಗುತ್ತಿರುವುದಕ್ಕೆ 44  ಕುಟುಂಬಗಳು ವ್ಯಕ್ತಪಡಿಸಿದ ಸಂತಸ.

ಮುಧೋಳದ ರಮೇಶ ನರಸಪ್ಪ ಚೆಟ್ಟಪಲ್ಲಿ, ಬಸಪ್ಪ ಬಿಚ್ಚಪ್ಪ, ಮಹಾಲಿಂಗಮ್ಮ ತಾಯಪ್ಪ, ದೊಡ್ಡ ಕಿಷ್ಡಪ್ಪ ನರಸಪ್ಪ, ದ್ಯಾವಮ್ಮ ಭೀಮಪ್ಪ ಮುಂತಾದವರು ಸೋಮವಾರ ಮುಧೋಳ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಶಾಸಕರ ಅಧ್ಯಕ್ಷತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ಪಡೆದ ಸಂದರ್ಭದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಈ ಜನಸ್ಪಂದನ ದಲ್ಲಿ 44 ಕುಟುಂಬಗಳಿಗೆ ಹೊಲದ ಹಕ್ಕು ಬದಲಾವಣೆ ಪತ್ರ, 14 ಜನರಿಗೆ ವೃದ್ಧಾಪ್ಯ ವೇತನ, 10 ಮಹಿಳೆಯರಿಗೆ ವಿದವಾ ವೇತನ, ಐದು ಜನರಿಗೆ ಕೃಷಿ ಯಂತ್ರೋಪಕರಣ ವಿತರಣೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಎನ್ ಇ ಕೆ ಆರ್ ಟಿ ಸಿ ಅಧ್ಯಕ್ಷರಾಗಿರುವ ರಾಜಕುಮಾರ ಪಾಟೀಲ್ ತೇಲ್ಕೂರ, ಜನಸ್ಪಂದನ ಒಂದು ದಿನಕ್ಕೆ ಸಿಮೀತವಲ್ಲ. ವಾರ ಮುಂಚೆ ಹಾಗೂ ಜನಸ್ಪಂದನ ನಂತರ ನೋಡಲ್ ಅಧಿಕಾರಿಯೊಬ್ಬರು ಎರಡು ವಾರ ಕಾರ್ಯ ಎಲ್ಲ ದೂರುಗಳಿಗೆ ಪರಿಹಾರ ಕಲ್ಪಿಸಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಂದು ಮುಟ್ಟಿಸಲಿದ್ದಾರೆ ಎಂದರು.

Advertisement

ಸೇಡಂ ತಾಲೂಕಿನಲ್ಲಿ 43 ಸಾವಿರ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ ಸಮ್ಮಾನ‌ನಿಧಿ ಅಡಿ ವರ್ಷಕ್ಕೆ 10 ಸಾವಿರ ಧನ ಸಹಾಯ ಪಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಲಾಗಿದೆ‌.‌ಮುಧೋಳಕ್ಕೆ 2  ಕೋಟಿ ರೂ ಸಾಲ ನೀಡಲಾಗುವುದು. ‌ಅದೇ ರೀತಿ ಹೊಲದಲ್ಲಿ ಬೊರ್ ವೆಲ್ ಕೊರೆಸಲು, ಹಣ್ಣು, ಹೂವು, ತರಕಾರಿ ಬೆಳೆಯಲು ಸಹ ಬಡ್ಡಿ ರಹಿತ ಸಾಲ ನೀಡಲಾಗುವುದು.‌ ಬಹು ಮುಖ್ಯವಾಗಿ ಹೈನುಗಾರಿಕೆಗಾಗಿ ಸಹ ಸಾಲ ಕೊಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತೇಲ್ಕೂರ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲರೂ ಕೆಲಸ ಮಾಡಿ. ಮಹಿಳೆಯರ ಕೂಲಿ ಹಣವನ್ನು ಗಂಡ ಇಲ್ಲವೇ ಮನೆಯ ಇತರರು ಒತ್ತಾಯದಿಂದ ಹಣ ಪಡೆದಲ್ಲಿ ಪೊಲೀಸ್ ಗೆ ದೂರು ಕೊಡಿ. ದೂರಿಗೆ ತಕ್ಷಣವೇ ಸ್ಪಂದಿಸಿ ಎಂದು ಪೊಲೀಸ್ ರಿಗೆ ಸೂಚಿಸಿದ ಶಾಸಕ ರಾಜಕುಮಾರ ತೇಲ್ಕೂರ, ಮುಧೋಳ ವಲಯದಲ್ಲಿ ರಾಜರೋಷವಾಗಿ ಕ್ಲಬ್ ನಡೆಯುತ್ತಿದೆ ಎಂಬ ದೂರುಗಳು ಬರುತ್ತಿವೆ. ಮೊದಲು ಅವುಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಲಾಯಿತು.

ತಹಶಿಲ್ದಾರ ಬಸವರಾಜ ಬೆಣ್ಣೆಶಿರೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಪಂಚಾಯಿತಿ ಇಓ ಗುರುನಾ ಶೆಟಕಾರ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next