Advertisement

‘ರೈತರ ಮನೆ ಹಾಳು ಮಾಡಲು ಬಂದಿದ್ದೀಯಾ..?’

06:56 AM Feb 03, 2019 | Karthik A |

ಮಂಡ್ಯ: ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರಿಗೆ ವಿತರಿಸಲು ತಂದಿದ್ದ ಪಂಪ್ ಸೆಟ್ ಮತ್ತು ಕೊಳವೆಗಳ ಗುಣಮಟ್ಟ ಕಳಪೆಯಾಗಿರುವುದನ್ನು ಕಂಡ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ಸಾಮಾಗ್ರಿ ಪೂರೈಕೆದಾರರ ವಿರುದ್ಧ ಗರಂ ಆದ ಘಟನೆ ವರದಿಯಾಗಿದೆ.

Advertisement

ಇನ್ನೇನು ಪರಿಹಾರ ಸಾಮಾಗ್ರಿಗಳನ್ನು ವಿತರಿಸಬೇಕು ಅನ್ನುವಷ್ಟರಲ್ಲಿ ನಾರಾಯಣ ಸ್ವಾಮಿ ಅವರು ಸಾಮಾಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ ಆಗ ಅವುಗಳ ಗುಣಮಟ್ಟ ಕಳಪೆಯಾಗಿರುವುದು ಕಂಡುಬಂದಿದೆ. ಆಗ ಸ್ಥಳದಲ್ಲಿದ್ದ ಪೂರೈಕೆದಾರರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡ ಶಾಸಕರು, ‘ನೀವು ರೈತರ ಮನೆ ಹಾಳು ಮಾಡಲು ಬಂದಿದ್ದೀರಾ…’ ಎಂದು ಹೆಳಿ ತಕ್ಷಣವೇ ಕಳಪೆ ಸಾಮಾಗ್ರಿಗಳನ್ನು ಹಿಂದೆ ತೆಗೆದುಕೊಂಡು ಹೋಗಲು ಹೇಳಿದ್ದಾರೆ. ಉತ್ತಮ ಗುಣಮಟ್ಟದ ಹೊಸ ಸಾಮಾಗ್ರಿಗಳು ಬಂದ ಬಳಿಕ ರೈತರಿಗೆ ಅವುಗಳನ್ನು ವಿತರಿಸುವುದಾಗಿ ಜೆಡಿಎಸ್ ಶಾಸಕರು ಸ್ಥಳದಲ್ಲಿದ್ದ ರೈತರಲ್ಲಿ ಮನವಿ ಮಾಡಿಕೊಂಡರು. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವಿಫಲರಾದ ಸಂಬಂಧಿತ ಅಧಿಕಾರಿಗಳನ್ನೂ ಸಹ ಶಾಸಕರು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next