Advertisement

ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ

05:55 PM Feb 26, 2021 | Team Udayavani |

ದೇವನಹಳ್ಳಿ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಿ, ನೌಕರರಿಗೆ ತರಬೇತಿ ಕೊಡಬೇಕು. ಮೊಟ್ಟೆಯನ್ನು ಆಹಾರ ಪದಾರ್ಥಗಳ ಜತೆಯಲ್ಲಿ ಸರಬರಾಜು ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಅಂಗನವಾಡಿ ನೌಕರರ ಸಂಘದಿಂದ ನಗರದ ಶಾಸಕರ ಕಚೇರಿಯಲ್ಲಿ ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಈ ವೇಳೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪವತಮ್ಮ ಮಾತನಾಡಿ, ಕೇಂದ್ರ ಸರ್ಕಾರ ಐಸಿಡಿಎಸ್‌ ಯೋಜನೆಗೆ ತಮ್ಮ ಪಾಲಿನ ಷೇರನ್ನು ಹೆಚ್ಚಿಸಬೇಕು. ಬಜೆಟ್‌ನಲ್ಲಿ ಕಡಿತವಾಗಿ ರುವ  8,452.38 ಕೋಟಿ ರೂ.ಹಣ ವಾಪಾಸ್‌ ನೀಡಬೇಕು. ಕಾರ್ಯಕರ್ತೆ ಯರಿಗೆ 30 ಸಾವಿರ ರೂ., ಸಹಾಯಕಿ ಯಗೆ 21 ಸಾವಿರ ರೂ.ವೇತನ ಕೊಡ ಬೇಕು. ಸೇವಾಜೇಷ್ಠತೆ ಆಧಾರದಲ್ಲಿ ವೇತನ ಪಾವತಿ ಮಾಡಬೇಕು. ಕೊರೊನಾ ವಾರಿಯರ್ಸ್‌ಗಳಾಗಿ ನಿಧನರಾದ 25 ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಎಲ್‌.ಎನ್‌.ನಾರಾಯಣ ಸ್ವಾಮಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರದ ಗಮನಕ್ಕೆ ತರುತ್ತೇನೆ. ಅಧಿ ವೇಶನದಲ್ಲಿ ನಿಮ್ಮ ಬೇಡಿಕೆಗಳು ಸಂಬಂಧಿ ಸಿದಂತೆ ಚರ್ಚಿಸುತ್ತೇನೆ. ಸರ್ಕಾರ ಕೂಡಲೇ ಕೊರೊನಾ ವಾರಿಯರ್ಸ್‌ ಗಳಾಗಿ ಸಾವನ್ನಪ್ಪಿದವರಿಗೆ 30 ಲಕ್ಷ ರೂ. ಪರಿಹಾರ ಕೊಡಬೇಕು. ಕಾರ್ಯಕರ್ತೆ ಯರಿಗೆ, ಸಹಾಯಕಿಯರಿಗೆ ಸಂಬಳ ನೀಡಲು ಸರ್ಕಾರಕ್ಕೆ ಒತ್ತಡ ತರುತ್ತೇನೆ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಖಜಾಂಚಿ ಅನುಸೂಯದೇವಿ, ಕಾರ್ಯ ದರ್ಶಿ ಪಾರ್ವತಮ್ಮ, ಸಹ ಕಾರ್ಯದರ್ಶಿ ಲೀಲಾವತಿ, ಸದಸ್ಯರಾದ ರತ್ನಮ್ಮ, ಅರಸಮ್ಮ, ವಸಂತ, ಲತಾ, ಲಕ್ಷ್ಮೀ ಆಶಾ ,ಗಿರಿಜಾಂಬ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next