Advertisement

MLA ಮರ್ಡರ್‌ ಕೇಸ್‌ : ಜೈಲಿಗೆ ಮರಳಲು ಯುಪಿ ಶಾಸಕನಿಗೆ ಸುಪ್ರೀಂ ಆದೇಶ

05:31 PM Oct 23, 2018 | udayavani editorial |

ಹೊಸದಿಲ್ಲಿ : ಕೊಲೆ ಕೇಸಿನಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿ ಪ್ರಕೃತ ವೈದ್ಯಕೀಯ ನೆಲೆಯಲ್ಲಿ ಮಧ್ಯಾವಧಿ ಜಾಮೀನು ಪಡೆದು ಹೊರಗಿರುವ ಉತ್ತರ ಪ್ರದೇಶದ ರಾಜಕಾರಣಿ ಡಿ ಪಿ ಯಾದವ್‌ ಗೆ ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ನ.16ರಂದು ಡೆಹರಾಡೂನ್‌ ಜೈಲಿಗೆ ಮರಳಿ ಬಾಕಿ ಉಳಿದಿರುವ ಜೈಲು ಶಿಕ್ಷೆಯನ್ನು ಪೂರೈಸುವಂತೆ ಆದೇಶಿಸಿದೆ.

Advertisement

ಗಾಜಿಯಾಬಾದ್‌ ನ ದದ್ರಿ ಪ್ರದೇಶದ ಶಾಸಕ ಮಹೇಂದ್ರ ಸಿಂಗ್‌ ಭಾಟಿ ಅವರ ಕೊಲೆಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಡೆಹರಾಡೂನ್‌ನ ಸಿಬಿಐ ನ್ಯಾಯಾಲಯ 2015ರಲ್ಲಿ  ಡಿ ಪಿ ಯಾದವ್‌ ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಶಾಸಕ ಭಾಟಿ ಅವರನ್ನು 1992ರ ಡಿಸೆಂಬರ್‌ನಲ್ಲಿ ದದ್ರಿ ರೈಲ್ವೇ ಕ್ರಾಸಿಂಗ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next