Advertisement

ರ‍್ಯಾಲಿ ಕೇಸ್: ಜಿಗ್ನೇಶ್ ಮೇವಾನಿ ಸೇರಿ ಇತರರಿಗೆ 3 ತಿಂಗಳ ಜೈಲು ಶಿಕ್ಷೆ

04:56 PM May 05, 2022 | Team Udayavani |

ಮೆಹ್ಸಾನಾ: ಜುಲೈ 2017 ರಲ್ಲಿ ಮೆಹ್ಸಾನಾ ಪಟ್ಟಣದಿಂದ ಪೊಲೀಸ್ ಅನುಮತಿಯಿಲ್ಲದೆ ರ‍್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ವಡ್ಗಾಮ್  ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 12 ಮಂದಿಯನ್ನು ಗುಜರಾತ್‌ನ ಮೆಹ್ಸಾನಾದ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯವು ಗುರುವಾರ ದೋಷಿ ಎಂದು ತೀರ್ಪು ನೀಡಿ ಎಲ್ಲಾ ಅಪರಾಧಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ.ದಂಡ ವಿಧಿಸಿದೆ.

Advertisement

ಮೇವಾನಿ ಮತ್ತು ಅವರ ಸಹಚರರು ಉನಾದಲ್ಲಿ ಕೆಲವು ದಲಿತರ ಮೇಲೆ ಸಾರ್ವಜನಿಕ ಲಾಠಿ ಪ್ರಹಾರದ ಕರಾಳ ವರ್ಷವನ್ನು ಆಚರಿಸಲು 2017 ರಲ್ಲಿ ಮೆಹ್ಸಾನಾದಿಂದ ನೆರೆಯ ಬನಸ್ಕಾಂತ ಜಿಲ್ಲೆಯ ಧನೇರಾಗೆ ‘ಆಜಾದಿ ಕೂಚ್’ ರ‍್ಯಾಲಿಯನ್ನು ಮುನ್ನಡೆಸಿದ್ದರು.

ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜೆ ಎ ಪರ್ಮಾರ್ ಅವರ ಪೀಠ ತೀರ್ಪು ನೀಡಿದ್ದು,ರ‍್ಯಾಲಿ ನಡೆಸುವುದು ಅಪರಾಧವಲ್ಲ ಆದರೆ ಅನುಮತಿಯಿಲ್ಲದೆ ರ‍್ಯಾಲಿ ನಡೆಸುವುದು ಅಪರಾಧ” ಎಂದು ಹೇಳಿದ್ದಾರೆ. “ಅವಿಧೇಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ” ಎಂದು ನ್ಯಾಯಾಲಯವು ಗಮನಿಸಿದೆ ಎಂದಿದ್ದಾರೆ.ಎನ್‌ಸಿಪಿ ನಾಯಕಿ ರೇಷ್ಮಾ ಪಟೇಲ್ ಶಿಕ್ಷೆಗೊಳಗಾದವರಲ್ಲಿ ಸೇರಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಅಸ್ಸಾಂನ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಹೊಸ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next