Advertisement

ಕೋಡಿಗೆ ಶಾಸಕ ಹಾಲಾಡಿ ಭೇಟಿ : ತೆರವಿಗೆ ಸೂಚನೆ

06:40 AM Jul 08, 2018 | |

ಕುಂದಾಪುರ: ಕೋಡಿ ಬ್ರೇಕ್‌ ವಾಟರ್‌ ನಿರ್ಮಾಣ ಕಾಮಗಾರಿಯಿಂದಾಗಿ ಸಮುದ್ರದಲ್ಲಿ ಮರಳು ದಿಬ್ಬದಿಂದಾಗಿ ಮೀನುಗಾರರಿಗೆ ತೊಂದರೆಯಾಗಿದ್ದು, ಮುಂದಿನ ಮೀನುಗಾರಿಕೆ ಋತುವಿಗೆ ಮುನ್ನ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭರವಸೆ ನೀಡಿದರು.
 
ಅವರು ಶನಿವಾರ ಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 

Advertisement

ಕೋಡಿಯ ಸಮುದ್ರದಲ್ಲಿ ಸಂಗ್ರಹವಾದ ಮರಳು ದಿಬ್ಬದಿಂದ ಮುಂದಿನ ಋತುವಿನಲ್ಲಿ ಬೋಟುಗಳು ತೆರಳಲು ತೊಂದರೆಯಾಗಲಿದೆ ಎನ್ನುವ ಮೀನುಗಾರರ ಮನವಿಗೆ ಸ್ಪಂದಿಸಿದ ಶಾಸಕರು ಈ ಕುರಿತು ಬೆಳಗ್ಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್‌ ಹಾಗೂ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಮೀನುಗಾರಿಕೆ ಆರಂಭವಾಗುವುದರೊಳಗೆ ಆ ಮರಳನ್ನು ತೆರವು ಮಾಡಲು ಸೂಚನೆ ನೀಡಿದ್ದೇನೆ ಎಂದರು. 

ಕೋಡಿಯ ಮೀನುಗಾರರ ಸಮಸ್ಯೆ ಕುರಿತು ಮೀನುಗಾರ ನಾಗರಾಜ್‌ ಕಾಂಚನ್‌ ಮಾತನಾಡಿ, ಕೋಡಿಯ ಬ್ರೇಕ್‌ ವಾಟರ್‌ ಕಾಮಗಾರಿ ವೇಳೆ ಹೂಳೆತ್ತಿ, ಅದನ್ನು ಸಮುದ್ರದ ಹೊರಗೆ ಹಾಕದೇ ಅಲ್ಲಿಯೇ ರಾಶಿ ಹಾಕಿದ್ದಾರೆ. ಇದರಿಂದ ಈಗ ಸಮಸ್ಯೆ ಉದ್ಭವವಾಗಿದೆ. ಅದನ್ನು ಕೂಡಲೇ ಅಲ್ಲಿಂದ ತೆರವು ಮಾಡದಿದ್ದರೆ, ಆಗಸ್ಟ್‌ ನಲ್ಲಿ ಮೀನುಗಾರಿಕಾ ಋತು ಪ್ರಾರಂಭವಾದ ಬೋಟುಗಳು ತೆರಳಲು ತೊಂದರೆಯಾಗಲಿದೆ ಎಂದವರು ಹೇಳಿದರು. 

ಈ ಬಗ್ಗೆ ಜೂ. 15ರಂದು ವಿಸ್ತೃತವಾಗಿ ಉದಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು.ಈ ಸಂದರ್ಭದಲ್ಲಿ ಕೋಡಿ ಭಾಗದ ಅನೇಕ ಮಂದಿ ಮೀನುಗಾರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next