Advertisement

ಕೋವಿಡ್ ತಡೆಗೆ ಕಂಕಣ ತೊಟ್ಟ ಸಚಿವ ಪಾಟೀಲ

08:29 PM May 28, 2021 | Team Udayavani |

ಗದಗ: ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ನಾವಿಕನಂತೆ ಜಿಲ್ಲೆಯನ್ನು ಮುನ್ನಡೆಸುತ್ತಿದ್ದಾರೆ.

Advertisement

ಮೊದಲನೇ ಅಲೆಯ ಅನುಭವಗಳನ್ನಾಧರಿಸಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇ ಇಂದು ಸೋಂಕಿತರ ಕೈಹಿಡಿದಿವೆ. ಈ ಬಾರಿಯೂ ಸರಕಾರ ಹಾಗೂ ವಿವಿಧ ಗಣಿ ಕಂಪನಿಗಳ ಮೇಲೆ ತಮ್ಮ ಪ್ರಭಾವ ಬೀರಿ, ಜಿಲ್ಲೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸುವುದರ ಜತೆಗೆ ಅತ್ಯುತ್ತಮ ಆಸ್ಪತ್ರೆಗಳನ್ನಾಗಿಸುವ ಪ್ರಯತ್ನ ನಡೆಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕೈಗೊಂಡ ಅನೇಕ ಉಪಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕೈಮೀರಿಲ್ಲ. ನರಗುಂದ ತಾಲೂಕಿನಲ್ಲಿ ಒಟ್ಟು 1592 ಜನರಿಗೆ ಸೋಂಕು ತಗುಲಿದ್ದು, 241 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 8 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಸೋಂಕಿತರ ನೆರವಿಗೆ ಬೆಂಬಲಿಗರ ಪಡೆ: ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ನರಗುಂದ ತಾಲೂಕು ಹಾಗೂ ರೋಣ, ಗದಗಿನ ಕೆಲ ಹಳ್ಳಿಗಳೂ ಒಳಪಟ್ಟಿವೆ. ಕ್ಷೇತ್ರದ ಯಾರೊಬ್ಬರಿಗೆ ಸೋಂಕು ದೃಢಪಟ್ಟರೂ, ಸಚಿವರ ಸಹಾಯವಾಣಿಯಿಂದ ಕರೆ ಹೋಗುತ್ತದೆ. ಅಗತ್ಯವಿದ್ದವರಿಗೆ ಆಹಾರ ಕಿಟ್‌ ಹಾಗೂ ಔಷ ಧಗಳ ಕಿಟ್‌ ಒದಗಿಸಲಾಗುತ್ತದೆ. ಜತೆಗೆ ವೈದ್ಯಕೀಯ ಸೇವೆ ಅಗತ್ಯತೆ ಕಂಡು ಬಂದಲ್ಲಿ ಸೋಂಕಿತರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅದಕ್ಕಾಗಿ ಸಚಿವರ ಪುತ್ರ ಉಮೇಶಗೌಡ ಪಾಟೀಲ ಸೇರಿದಂತೆ 24 ಜನರ ಎರಡು ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ.

ಆಸ್ಪತ್ರೆಗಳ ಉನ್ನತೀಕರಣಕ್ಕೆ ಒತ್ತು: ಸತತ ಎರಡು ವರ್ಷಗಳಿಂದ ಕೊರೊನಾ ಅಬ್ಬರಿಸುತ್ತಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕೈಗೊಂಡ ವಿವಿಧ ಉಪಕ್ರಮಗಳು, ಜಿಮ್ಸ್‌ ವೈದ್ಯರ ಪರಿಶ್ರಮದಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಾವು-ನೋವುಗಳು ಸಂಭವಿಸಿಲ್ಲ. ಕೊರೊನಾ ಮೊದಲ ಅಲೆಯಲ್ಲಿ ಜಿಮ್ಸ್‌ನಲ್ಲಿ 120 ಆಕ್ಸಿಜನ್‌ ಬೆಡ್‌, 30 ಐಸಿಯು ಬೆಡ್‌, 13 ಕೆಎಲ್‌ ಆಕ್ಸಿಜನ್‌ ಸಂಗ್ರಹಗಾರ ಸಹಿತ 250 ಬೆಡ್‌ ಗಳ ಆಸ್ಪತ್ರೆ ಸ್ಥಾಪಿಸಲಾಗಿದೆ. ಆದರೆ, ಈ ಬಾರಿ 2ನೇ ಅಲೆ ತೀವ್ರವಾಗುತ್ತಿದ್ದಂತೆ ಜಿಮ್ಸ್‌ ಆಸ್ಪತ್ರೆಯಲ್ಲಿ ಸಮರೋಪಾದಿಯಲ್ಲಿ 30 ಸಾಮಾನ್ಯ, 340 ಆಕ್ಸಿಜನ್‌ ಬೆಡ್‌ ಹಾಗೂ 80 ವೆಂಟಿಲೇಟರ್‌ ಸೇರಿದಂತೆ ಒಟ್ಟು 450 ಬೆಡ್‌ಗಳ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲಾಯಿತು. ಪ್ರತಿ ತಾಲೂಕು ಆಸ್ಪತ್ರೆಗೆ 50 ಆಕ್ಸಿಜನ್‌ ಬೆಡ್‌ ಒದಗಿಸಿದ್ದರಿಂದ ಕೋವಿಡ್‌ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ ಎನ್ನುತ್ತಾರೆ ವೈದ್ಯರು.

Advertisement

ಪ್ರಾಣವಾಯು ಉತ್ಪಾದನೆಗೆ ಕ್ರಮ: ಕೊರೊನಾ 2ನೇ ಅಲೆಯಲ್ಲಿ ಎಲ್ಲೆಡೆ ಪ್ರಾಣವಾಯು ಮತ್ತು ವೆಂಟಿಲೇಟರ್‌ಗಳ ಕೂಗು ದೊಡ್ಡ ಮಟ್ಟದಲ್ಲಿತ್ತು. ಆದರೆ ಜಿಮ್ಸ್‌ನಲ್ಲಿ 13 ಕೆಎಲ್‌ ಸಾಮರ್ಥ್ಯದ ಸಂಗ್ರಹ ಘಟಕ ಇದ್ದಿದ್ದರಿಂದ ಹೆಚ್ಚಿನ ಸಮಸ್ಯೆ ಕಂಡು ಬರಲಿಲ್ಲ. ಆದರೂ, ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಸಚಿವ ಸಿ.ಸಿ.ಪಾಟೀಲ ವಿಶೇಷ ಆಸಕ್ತಿ ತೋರಿದ್ದಾರೆ. ಸರಕಾರದ ವಿವಿಧ ಯೋಜನೆಗಳಿಂದ ಒಟ್ಟು 5000 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ಮಂಜೂರು ಮಾಡಿಸಿದ್ದು, ಶೀಘ್ರವೇ 3 ಸಾವಿರ ಎಲ್‌ಪಿಎಂ ಘಟಕಗಳು ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನರಗುಂದದ 390 ಎಲ್‌ಪಿಎಂ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಜಿಮ್ಸ್‌ ಪಿಎಂ ಕೇರ್ ನಿಧಿ ಯಡಿ 50 ವೆಂಟಿಲೇಟರ್‌ ಒದಗಿಸಲಾಗಿದೆ. ಬಲೊªàಟಾ ಕಂಪನಿಯಿಂದ ಒಂದು ಐಸಿಯು ಸಹಿತ ಆಂಬ್ಯುಲೆನ್ಸ್‌ ಅನ್ನು ಜಿಮ್ಸ್‌ಗೆ ಒದಗಿಸಲಾಗಿದೆ. ಜಿಲ್ಲೆಗೆ ನಾಲ್ಕು ಐಸಿಯು ಸಹಿತ ಆಂಬ್ಯುಲೆನ್ಸ್‌ ಒದಗಿಸಲು ಹಟ್ಟಿ ಚಿನ್ನದ ಗಣಿ ಕಂಪನಿ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಸಚಿವ ಸಿ.ಸಿ.ಪಾಟೀಲರ ಪ್ರಯತ್ನ ಅಲ್ಲಗೆಳೆಯುವಂತಿಲ್ಲ.

ನರಗುಂದ, ಹೊಳೆಆಲೂರಿಗೆ 50 ಲಕ್ಷ ರೂ.:ರಾಜ್ಯ ಸರಕಾರ ಕೋವಿಡ್‌-19 ನಿಯಂತ್ರಣಕ್ಕಾಗಿ ಶಾಸಕರಿಗೆ ಬಿಡುಗಡೆ ಮಾಡಿರುವ 50 ಲಕ್ಷ ರೂ. ಅನುದಾನದಲ್ಲಿ ನರಗುಂದ ತಾಲೂಕು ಆಸ್ಪತ್ರೆಗೆ 30 ಲಕ್ಷ ರೂ. ಹಾಗೂ ಹೊಳೆಆಲೂರು ಪಿಎಚ್‌ಸಿಗೆ 20 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಈ ಮೂಲಕ ಆಯಾ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಖರೀದಿಗೆ ಸೂಚಿಸಿದ್ದು, ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಖಾತ್ರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿರುವ ಸಕ್ರಿಯ ಸೋಂಕಿತರಿಗೂ ವೈಯಕ್ತಿಕವಾಗಿ ತಲಾ ಒಂದು ಬಿಸಿ ನೀರಿನ ಹಬೆ ತೆಗೆದುಕೊಳ್ಳುವ ಸ್ಟೀಮರ್‌ ಒದಗಿಸಲು ಚಿಂತನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಸೋಂಕು ನಿವಾರಣೆಗೆ ಜಿಲ್ಲಾ-ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣದಲ್ಲಿ ಸರಕಾರ, ಜಿಲ್ಲಾಡಳಿತ ಮತ್ತು ಜನಸಾಮಾನ್ಯರ ಸಂಪರ್ಕ ಕೊಂಡಿಯಂತೆ ಸಚಿವ ಸಿ.ಸಿ.ಪಾಟೀಲ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next