Advertisement
ಮುಂದುವರಿದ ಮಂಗಳೂರು ವನ್ ಸಿಬಂದಿ ಸಮಸ್ಯೆಸುರತ್ಕಲ್ ಮಂಗಳೂರು ವನ್ ಕೇಂದ್ರದಲ್ಲಿ ಅವ್ಯವಸ್ಥೆ ಮುಂದುವರಿದಿದ್ದು ಸಿಬಂದಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಕಟ್ಟಡ ಸೋರುವ ಸ್ಥಿತಿಯಿದೆ. ವೇತನ ಬೇಡಿಕೆ ಮಂಡಿಸಿದ ಮಂಗಳೂರು ವನ್ ಸಿಬಂದಿ ಪೈಕಿ ಐವರನ್ನು ವಜಾ ಮಾಡಿದ್ದು ಸುರತ್ಕಲ್ ಮಹಿಳಾ ಸಿಬಂದಿಯೋರ್ವರಿಗೆ ಹಿಂಬಡ್ತಿ ನೀಡಲಾಗಿದೆ. ಈ ಬಗ್ಗೆ ಶಾಸಕರಲ್ಲಿ ದೂರಿಕೊಂಡ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಕಾರ್ಮಿಕ ಅಧಿ ಕಾರಿಗೆ ದೂರವಾಣಿ ಕರೆ ಮಾಡಿ ಸುರತ್ಕಲ್ ಕಚೇರಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಕಾರ್ಪೊರೇಟರ್ಗಳಾದ ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯಾ, ಬಿಜೆಪಿ ಮುಖಂಡರಾದ ವಸಂತ್ ಹೊಸಬೆಟ್ಟು, ಭರತ್ರಾಜ್ ಕೃಷ್ಣಾಪುರ, ಶಿವರಾಮ್ ಗುಡ್ಡೆಕೊಪ್ಲ, ಜಯಂತ್ ಸಾಲ್ಯಾನ್, ವಿಠ್ಠಲ ಸಾಲ್ಯಾನ್, ಉಮೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಕಂಪ್ಯೂಟರ್, ಓರ್ವ ಆಪರೇಟರ್ ನೇಮಕಕ್ಕೆ ತಹಶೀಲ್ದಾರ್ಗೆ ಸೂಚಿಸಲಾಗಿದೆ. ಇನ್ನೂ ಮಾದರಿಯಾಗಿ ಇರಬೇಕಾದ ಸಂಸ್ಥೆ ಮಂಗಳೂರು ವನ್ ಸರಕಾರಿ ಅಧೀನದಲ್ಲಿರುವ ಹೊರಗುತ್ತಿಗೆ ಸಂಸ್ಥೆಯಾಗಿದ್ದು ಇಲ್ಲಿಯೇ ಸಿಬಂದಿಗೆ ಅನ್ಯಾಯವಾಗುತ್ತಿದೆ. ಕಡಿಮೆ ವೇತನ ನೀಡುತ್ತಿರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸಚಿವರಲ್ಲಿ ಮಾತನಾಡಿ ಸಿಬಂದಿ ಸಮಸ್ಯೆಗಳಿಗೆ ಗಮನಹರಿಸಲಿದ್ದೇನೆ.
– ಡಾ| ವೈ. ಭರತ್ ಶೆಟ್ಟಿ, ಶಾಸಕರು