Advertisement

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

02:15 AM May 19, 2024 | Team Udayavani |

ಸುಕ್ಮಾ: ಸುಮಾರು 16 ಪ್ರಕರಣಗಳು ದಾಖಲಾಗಿದ್ದ ಹಾಗೂ ತಲೆಗೆ ಒಂದು ಲಕ್ಷ ರೂ. ಬಹುಮಾನವಿದ್ದ ನಕ್ಸಲನೊಬ್ಬ ಶನಿವಾರ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.ಪೋಲಂಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಜಾರ್‌ಪರ ಗ್ರಾಮದಲ್ಲಿ ಪೊಲೀಸರು ನಕ್ಸಲ್‌ ನಿಗ್ರಹ ಕಾರ್ಯಾಚರಣೆಗಾಗಿ ತೆರಳಿದ್ದಾಗ ಶನಿವಾರ ಬೆಳಿಗ್ಗೆ 6.30ರ ಸಂದರ್ಭ ಎನ್‌ಕೌಂಟರ್‌ ಸಂಭವಿಸಿದೆ.

Advertisement

ಮಾವೋವಾದಿಗಳ ಕೊಂಟಾ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ವೆಟ್ಟಿ ಮಂಗುx, ಪ್ರಾದೇಶಿಕ ಕಮಾಂಡ್‌-ಇನ್‌-ಚೀಫ್ ಹಿತೇಶ್‌ ಸೇರಿದಂತೆ ಹಲವು ಹಿರಿಯ ನಕ್ಸಲರು ಸೇರಿ 15-20 ನಕ್ಸಲರು, ತೋಲೆ°„, ಟೆಟ್ರೈ, ಬಂಜಾರ್‌ಪರ ಮತ್ತು ಅರ್ಲಂಪಲ್ಲಿ ಗ್ರಾಮಗಳ ವ್ಯಾಪ್ತಿಯ ಕಾಡುಗಳಲ್ಲಿ ಇರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಶುಕ್ರವಾರ ರಾತ್ರಿ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಆರಂಭಿಸಿತು. ಸುಮಾರು 20ರಿಂದ 25 ನಿಮಿಷಗಳು ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಸಿಬಂದಿ ನಕ್ಸಲರನ್ನು ಹುಡುಕಲು ಆರಂಭಿಸಿದಾಗ ಅವರು ದಟ್ಟ ಅರಣ್ಯದೊಳಗೆ ತಪ್ಪಿಸಿ ಕೊಂಡರು. ಈ ವೇಳೆ ನಕ್ಸಲನೊಬ್ಬನ ಮೃತದೇಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next