Advertisement

ಶಾ ಪುತ್ರನ ವ್ಯವಹಾರ ಕುರಿತು ರಾಹುಲ್‌ ವ್ಯಂಗ್ಯ

06:45 AM Oct 21, 2017 | Team Udayavani |

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಮತ್ತೂಂದು ಸುತ್ತಿನ ವಾಗ್ಧಾಳಿ ನಡೆಸಿರುವ ಕಾಂಗ್ರೆಸ್‌ ಉಪಾ ಧ್ಯಕ್ಷ ರಾಹುಲ್‌ ಗಾಂಧಿ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಗುರಿಯಾಗಿಸಿ ವ್ಯಂಗ್ಯಭರಿತವಾಗಿ ಮಾತನಾಡಿದ್ದಾರೆ.

Advertisement

ಜಯ್‌ ಶಾ ಅವರು ಮಾನಹಾನಿ ಕೇಸು ದಾಖಲಿಸಿದ ಬಳಿಕ, ಅಹಮದಾಬಾದ್‌ನ ನ್ಯಾಯಾಲಯವು ಆರೋಪಗ ಳಿಗೆ ಸಂಬಂಧಿಸಿ ಮಧ್ಯಂತರ ಪ್ರತಿಬಂಧಕಾಜ್ಞೆ ಹೊರಡಿಸಿದೆ. ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್‌, “ಮಿತ್ರೋಂ, ನಾನು ಇನ್ನು ಶಾ-ಜಾದಾ ವಿರುದ್ಧ ಮಾತಾಡು ವುದಿಲ್ಲ, ಬೇರೆಯವರಿಗೂ ಮಾತನಾಡಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಈ ಹಿಂದೆ ಹೇಳಿದ್ದ, “ನಾನೂ ತಿನ್ನುವುದಿಲ್ಲ, ಇನ್ನೊಬ್ಬರಿಗೂ ತಿನ್ನಲು ಬಿಡುವುದಿಲ್ಲ’ ಎಂಬ ಹೇಳಿಕೆಗೆ ಅಣಕವಾಡಿ ಈ ಟ್ವೀಟ್‌ ಮಾಡಿದ್ದಾರೆ. ಇದಕ್ಕೂ ಮುನ್ನ ರಾಹುಲ್‌, “ಶಾ-ಜಾದಾಗೆ ಸರ್ಕಾರದಿಂದಲೇ ಕಾನೂನು ನೆರವು? ವೈ ದಿಸ್‌ ಕೊಲವೆರಿ ಡಾ,’ ಎಂದು ಟ್ವೀಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next