Advertisement

ಮಿಷನ್‌ 100: ವಿದ್ಯಾರ್ಥಿಗಳ ಮನೆ-ಮನೆ ಭೇಟಿ

11:16 PM Oct 01, 2019 | sudhir |

ಕಾರ್ಕಳ: ಮುಂದಿನ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಶೇ. 100 ಫ‌ಲಿತಾಂಶ ಸಾಧಿಸಬೇಕೆನ್ನುವ ನಿಟ್ಟಿನಲ್ಲಿ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಅ. 1ರಂದು 10ನೇ ತರಗತಿಯ 9 ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲಾಯಿತು.

Advertisement

ಕೆಎಂಇಎಸ್‌ ವಿದ್ಯಾರ್ಥಿ ಕುಕ್ಕುಂದೂರಿನ ಸಾûಾತ್‌, ಬೈಲೂರು ಸರಕಾರಿ ಪ್ರೌಢ ಶಾಲೆಯ ಸುದೀಪ್‌, ಪೆರ್ವಾಜೆ ಸರಕಾರಿ ಪ್ರೌಢಶಾಲೆಯ ಅಮೃತಾ ಪ್ರಭು, ಭುವನೇಂದ್ರ ಪ್ರೌಢಶಾಲೆಯ ದೀಪಶ್ರೀ ಮತ್ತು ಕಾರ್ತಿಕ್‌, ಎಸ್‌ವಿಟಿ ಅನುದಾನಿತ ಪ್ರೌಢ ಶಾಲೆಯ ಸೌರವ್‌ ಮತ್ತು ನವ್ಯಾ, ಪೆರ್ವಾಜೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ಹರ್ಷಿàಲಾ ಮನೆಗೆ ಭೇಟಿ ನೀಡಲಾಯಿತು. ಕಾರ್ಕಳ ಮಿಷನ್‌ 100 ಅಭಿಯಾನದ ರೂವಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್‌. ಶಶಿಧರ್‌, ಮಿಷನ್‌ 100 ನೋಡಲ್‌ ಆಫೀಸರ್‌ ವೆಂಕಟರಮಣ ಕಲ್ಕೂರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಅಕ್ಷರ ದಾಸೋಹ ಅಧಿಕಾರಿ ಟಿ. ಭಾಸ್ಕರ್‌, ಎಸ್‌ವಿಟಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಯೋಗೀಂದ್ರ ನಾಯಕ್‌, ಬಿಆರ್‌ಪಿ ಪ್ರವೀಣ್‌ ಶೆಟ್ಟಿ ಅಭಿಯಾನದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next