ಕಲ್ಲು ಗಣಿಗಾರಿಕೆಗೆ ನಿಷೇಧ ಹೇರಲಾಗಿತ್ತು. ದಾಳಿವೇಳೆ 29 ವಾಹನ ಸೇರಿದಂತೆ 3524 ಹೆಚ್ಚು ಕಲ್ಲುದಿಮ್ಮಿಗಳನ್ನು ಜಪ್ತಿ ಮಾಡಲಾಗಿತ್ತು. ಕೊಯಿರಾ, ಚಿಕ್ಕಗೊಲ್ಲಹಳ್ಳಿ, ಬ್ಯಾಡರಹಳ್ಳಿ, ಮಾಯಸಂದ್ರ, ಮನಗೊಂಡನಹಳ್ಳಿ, ಜ್ಯೋತಿಪುರ, ಮೀಸಗಾನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿತ್ತು.
Advertisement
ಲಕ್ಷಾಂತರ ರೂ ನಷ್ಟ: ಜಿಲ್ಲಾಡಳಿತ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ. ಮೌಲ್ಯದ ಕಲ್ಲು ದಿಮ್ಮಿಗಳು ನಾಪತ್ತೆಯಾಗಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸ್ಥಳೀಯ ರೈತರು ಹೇಳುತ್ತಿದ್ದಾರೆ.
ಗುಣಮಟ್ಟದ ದಿಮ್ಮಿಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವು. ಇನ್ನು ಬಿಟ್ದಾರರು ಹರಾಜಿನಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಮುಂದೂಡಲಾಗಿತ್ತು ಎಂದು ಸ್ಥಳೀಯರಾದ ಎನ್.ಪ್ರಸನ್ನ ಹೇಳುತ್ತಾರೆ. ಸ್ಥಳೀಯರು ಹೇಳ್ಳೋದೇನು?
ಕಲ್ಲು ದಿಮ್ಮಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈಗ ದಿಮ್ಮಿಗಳ ಸರ್ವೆಗೆ ಮುಂದಾಗಿದೆ. 2014ರಲ್ಲಿ ವಶಪಡಿಸಿಕೊಂಡ ದಿಮ್ಮಿಗಳ ಸಂಖ್ಯೆ ಎಷ್ಟು, ಯಾವ ಜಮೀನಿನಲ್ಲಿ ಎಷ್ಟಿವೆ ಎಂಬುವುದನ್ನು ಅಂದಾಜು ಮೌಲ್ಯ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.
Related Articles
Advertisement
2014ರಲ್ಲಿ ವಶಪಡಿಸಿಕೊಂಡಿದ್ದ ಕಲ್ಲುದಿಮ್ಮಿಗಳು ನಾಪತ್ತೆಯಾಗಿರುವ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ. 15 ದಿನಗಳೊಳಗಾಗಿ ಕಲ್ಲು ದಿಮ್ಮಿಗಳ ಸರ್ವೆ ನಡೆಸಲಾಗುವುದು. ನಂತರ ಟೆಂಡರ್ ಕರೆದು ಹರಾಜು ಹಾಕಲಾಗುವುದು. ದಿಮ್ಮಿಗಳ ನಾಪತ್ತೆ ಕುರಿತು ಪೊಲೀಸರು, ನಮ್ಮ ಇಲಾಖೆ ತನಿಖೆ ನಡೆಸುತ್ತಿದೆ. ಬಿ.ಆರ್.ಸುರೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಉಪನಿರ್ದೇಶಕ
ಕಲ್ಲು ದಿಮ್ಮಿಗಳ ಕಳವು ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದ್ದೇವೆ. ಯಾರು ಕಳವು ಮಾಡಿದ್ದಾರೆ ಎಂಬುದನ್ನುಬಹಿರಂಗಪಡಿಸಲ್ಲ. ಪ್ರಸ್ತುತ ಗಂಭೀರ ಪ್ರಕರಣವಾಗಿರುವುದರಿಂದ ತನಿಖೆ ಕೈಗೊಂಡಿದ್ದೇವೆ. ಆರೋಪಿಗಳನ್ನು ಬಂಧಿಸಿದ ನಂತರ ಮಾಹಿತಿ ನೀಡುತ್ತೇವೆ.
ಮಂಜುನಾಥ್,ವೃತ್ತ ನಿರೀಕ್ಷಕ ಎನ್.ಮಹೇಶ್