Advertisement

ಗಾಂಧಿ ಜಯಂತಿ ಮುನ್ನಾ ದಿನ ವಿಶಾಖಪಟ್ಟಣದಲ್ಲಿ ಗಾಂಧಿ ಪ್ರತಿಮೆ ಧ್ವಂಸ

04:16 PM Oct 02, 2018 | udayavani editorial |

ವಿಶಾಖಪಟ್ಟಣ: ಗಾಂಧಿ ಜಯಂತಿ ಮುನ್ನಾ ದಿನವಾದ ನಿನ್ನೆ ಸೋಮವಾರ ರಾತ್ರಿ ವಿಶಾಖಪಟ್ಟಣದ ಮಧುರವಾಡ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಅಪರಿಚಿತ ದುಷ್ಕರ್ಮಿಗಳ ಈ ಕೃತ್ಯದ ಬಗ್ಗೆ ಸ್ಥಳೀಯ ವ್ಯಕ್ತಿಯೋರ್ವರು ನೀಡಿದ ದೂರನ್ನು ಅನುಸರಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸರ್ಕಲ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಲಕ್ಷ್ಮಣ ಮೂರ್ತಿ ತಿಳಿಸಿದ್ದಾರೆ. 

ಈ ಘಟನೆಯ ಹೊರತಾಗಿಯೂ ಪಟ್ಟಣದಲ್ಲಿಂದು ಗಾಂಧಿ ಜಯಂತಿ ಸಾಂಗವಾಗಿ ನೇರವೇರಿದೆ; ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದವರು ಹೇಳಿದ್ದಾರೆ. 

ಕಳೆದ ಗುರುವಾರವಷ್ಟೇ ಕೊಚ್ಚಿಯಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಘಟನೆಯನ್ನು ಅನುಸರಿಸಿ ಪೊಲೀಸರು ಬಿಹಾರ ಮೂಲದ, ಮಾನಸಿಕ ಅಸ್ವಸ್ಥ , ಶಂಕಿತನೋರ್ವನನ್ನು ಬಂಧಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next