Advertisement

ಶರಿಯತ್‌ ಮಾದರಿ ಹಿಂದೂ ಕೋರ್ಟ್‌

06:00 AM Aug 16, 2018 | Team Udayavani |

ಮೀರತ್‌: ಮುಸ್ಲಿಂ ಸಮುದಾಯದಲ್ಲಿ ವ್ಯಾಜ್ಯಗಳ ತೀರ್ಮಾನಕ್ಕಾಗಿ ಚಾಲ್ತಿಯಲ್ಲಿರುವ ಶರಿಯತ್‌ ನ್ಯಾಯಾಲಯದ ಮಾದರಿಯಲ್ಲೇ ಹಿಂದೂಗಳ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಹಿಂದೂ ನ್ಯಾಯಾಲಯ’ವನ್ನು ಅಖೀಲ ಭಾರತೀಯ ಹಿಂದೂ ಮಹಾ ಸಭಾ ಸಂಘಟನೆ ಬುಧವಾರ ಸ್ಥಾಪಿಸಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಆರಂಭವಾಗಿದೆ. ಮೊದಲ ಮುಖ್ಯ ನ್ಯಾಯಾಧೀಶರಾಗಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಪೂಜಾ ಶಕುನ್‌ ಪಾಂಡೆ ಅವರನ್ನು ನೇಮಿಸಲಾಗಿದೆ. ಮುಸ್ಲಿಮರಿಗೆ ಪ್ರತ್ಯೇಕವಾಗಿ ಶರಿಯತ್‌ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಪ್ರತಿಭಟಿಸಿ ಹಿಂದೂಗಳಿಗಾಗಿ ನ್ಯಾಯಾಲಯವನ್ನು ಸ್ಥಾಪಿಸಿದ್ದೇವೆಂದು ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್‌ ಶರ್ಮಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next