Advertisement

ಕಾರು ಅಪಘಾತ:ಉತ್ತರಾಖಂಡ್‌ ಸಚಿವರ ಪುತ್ರ ಸೇರಿ ಮೂವರು ಬಲಿ

09:02 AM Jun 27, 2019 | Vishnu Das |

ಫ‌ರೀದ್‌ ಪುರ್‌ : ಇಲ್ಲಿನ ಎನ್‌ಎಚ್‌ 24 ರಲ್ಲಿ ಬುಧವಾರ  ನಡೆದ ಭೀಕರ ಅಪಘಾತದಲ್ಲಿ ಉತ್ತಾರಖಂಡದ ಸಚಿವರ ಪುತ್ರ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ನಸುಕಿನ 3 ಗಂಟೆಯ ವೇಳೆಗೆ ಕಾರು ಟ್ರಕ್‌ಗೆ ಗುದ್ದಿ ನಜ್ಜುಗುಜ್ಜಾಗಿದೆ. ಸಚಿವ ಅರವಿಂದ್‌ ಪಾಂಡೆ ಅವರ ಪುತ್ರ ಅಂಕುರ್‌ ಮತ್ತು ಕಾರಿನಲ್ಲಿದ್ದಇಬ್ಬರು ಸ್ನೇಹಿತರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಗೋರಖ್‌ಪುರಕ್ಕೆ ಸ್ನೇಹಿತನ ವಿವಾಹ ಸಮಾರಂಭಕ್ಕೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next