Advertisement

ಬುಲೆಟ್ ನಲ್ಲೇ ಪ್ರವಾಸಿ ತಾಣಕ್ಕೆ ಸಚಿವ ಭೇಟಿ

01:13 PM Nov 06, 2019 | Team Udayavani |

ರಾಯಚೂರು: ಜಿಲ್ಲೆಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ನಗರದ ಮಲಯಾಬಾದ್ ಭೇಟಿ ನೀಡಲು ಬುಲೆಟ್ ತೆರಳಿದ ಪ್ರಸಂಗ ನಡೆಯಿತು.

Advertisement

ಬುಧವಾರ ಬೆಳಗ್ಗೆ ನಗರಕ್ಕೆ ಬಂದವರು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ಮನೆಗೆ ತೆರಳಿ ಉಪಹಾರ ಸೇವಿಸಿದರು. ಬಳಿಕ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮಲಯಾಬಾದ್ ಗೆ ತೆರಳಿದರು. ಆದರೆ, ಹಾದಿ ಸುಗಮವಾಗಿರದ ಕಾರಣ ಕಾರ್ಯಕರ್ತ ಬೈಕ್ ನಲ್ಲೇ ಮಲಯಾಬಾದ್ ಗೆ ತೆರಳಲು ಮುಂದಾದರು. ಗೋಶಾಲೆಗೆ ಭೇಟಿ ನೀಡಿದರಾದರೂ ಐತಿಹಾಸಿಕ ಕಲ್ಲಾನೆಗಳು, ಶಿವಲಿಂಗ ದೇವಸ್ಥಾನಕ್ಕೆ ತೆರಳದೆ ಹಿಂದುರುಗಿದರು. ಸುರಪುರ ಶಾಸಕ ರಾಜುಗೌಡ ಬೈಕ್ ಓಡಿಸಿದರೆ ಸಚಿವ ಹಿಂಬದಿ ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next