Advertisement

ಬೆಂಗಳೂರಿನಲ್ಲಿ ಕೋವಿಡ್ 19 ಸೋಂಕಿನ ಸಮರ್ಥ ನಿರ್ವಹಣೆ: ವಿ.ಸೋಮಣ್ಣ ಸುದ್ದಿಗೋಷ್ಟಿ

11:28 PM Jul 16, 2020 | Hari Prasad |

ಬೆಂಗಳೂರು: ವಸತಿ ಸಚಿವರಾಗಿರುವ ಹಾಗೂ ಬೆಂಗಳೂರು ಪೂರ್ವ ವಲಯದ ಕೋವಿಡ್-19 ಉಸ್ತುವಾರಿ ಸಚಿವರೂ ಆಗಿರುವ ವಿ. ಸೋಮಣ್ಣ ಅವರು ಕೋವಿಡ್ 19 ನಿಭಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿಚಾರಗಳು ಹೀಗಿವೆ:
– ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ನಡೆಸಿದ್ದೇವೆ.

– ಗೋವಿಂದರಾಜನಗರದಲ್ಲಿ 150 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದೇವೆ.

– ಡಾ.ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆ 500 ಬೆಡ್‌ಗಳ ಆಸ್ಪತ್ರೆ. 400 ಬೆಡ್‌ಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.

– ಪೂರ್ತಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಮಧ್ಯಾಹ್ನದೊಳಗೆ ಅದನ್ನು ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ.

Advertisement

– ಇಲ್ಲಿ 10 ವೆಂಟಿಲೇಟರ್ ವ್ಯವಸ್ಥೆಯೂ ಇರಲಿದೆ.

– ಕೋವಿಡ್ ಮತ್ತು ನಾನ್ ಕೋವಿಡ್ 150 ಬೆಡ್‌ಗಳನ್ನು ಮದುವೆ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಂದು ಕ್ಷೇತ್ರಕ್ಕೆ ಪ್ರತಿ ವಾರ್ಡ್‌ಗಳಲ್ಲಿ 2 ಅಂಬ್ಯುಲೆನ್ಸ್, 10 ಟಿಟಿ ವಾಹನಗಳು ಹಾಗೂ 2 ಮೃತದೇಹ ಸಾಗಿಸುವ ವಾಹನ ನೀಡಿದ್ದೇವೆ.

– ಶಿವಾಜಿನಗರದಲ್ಲೂ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ್ದೇನೆ.

– ಶಾಂತಿನಗರದ ಕೋವಿಡ್ ಕೇರ್ ಸೆಂಟರ್, ಫೀವರ್ ಸೆಂಟರ್ ಉದ್ಘಾಟನೆ ಮಾಡಿದ್ದೇವೆ.

– ಶಾಂತಿನಗರದಲ್ಲಿ 200 ಬೆಡ್‌ಗಳ ಆಸ್ಪತ್ರೆಯನ್ನು ಹೊಟೇಲ್‌ನಲ್ಲಿ ಮಾಡಲು ನಿರ್ಧರಿಸಿದ್ದೇವೆ.

– 1438 ಬೂತ್‌ಗಳು ನನ್ನ ಉಸ್ತುವಾರಿಗೆ ಬರುವ 6 ಕ್ಷೇತ್ರಗಳಲ್ಲಿ ಬರುತ್ತದೆ. ಈ ಎಲ್ಲಾ ಬೂತ್‌ಗಳನ್ನು ಕ್ರಿಯಾಶೀಲ ಮಾಡಿದ್ದೇವೆ.

– ಬೆಂಗಳೂರು ಪೂರ್ವ ವಲಯದಲ್ಲಿ 6 ಕಂಟ್ರೋಲ್ ರೂಂ ಮಾಡಿದ್ದೇವೆ.

– ಹೋಂ ಕ್ವಾರೆಂಟೈನ್‌‌ಗೆ ಒಳಗಾಗುವವರಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ.

– ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಶಾಂತಿನಗರ, ಪುಲಿಕೇಶಿನಗರ ಎಲ್ಲಾ ಕಡೆಗಳಲ್ಲೂ ವ್ಯವಸ್ಥೆ ಮಾಡಲಾಗಿದೆ.

– ನಾಳೆ ಬೆಳಿಗ್ಗೆ 11 ಘಂಟೆಗೆ ಎಲ್ಲಾ ಸಚಿವರನ್ನು ಸಭೆ ಕರೆದಿದ್ದಾರೆ. ನಗರದಲ್ಲಿನ ಎಲ್ಲಾ ಮಂತ್ರಿಗಳು ಶ್ರಮ ವಹಿಸಿದ್ದಾರೆ.

– ಬೆಂಗಳೂರು ಪೂರ್ವ ವಲಯದ ಕಂಟೈನ್‌ಮೆಂಟ್ ಜೋನ್‌ಗಳ ಮನೆಗಳಿಗೆ ರೇಷನ್ ಕಿಟ್ ಕೊಟ್ಟಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next