Advertisement

ಶಿವಮೊಗ್ಗ- ಹಾವೇರಿಯ ಕೋವಿಡ್ ಡೆತ್ ಆಡಿಟ್‌ಗೆ ಸಮಿತಿ : ಸಚಿವ ಸುಧಾಕರ್

08:54 PM Jun 12, 2021 | Team Udayavani |

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಕೊನೆ ಹಂತದಲ್ಲಿ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದ ಕಾರಣ ಡೆತ್ ರೇಟ್ ಹೆಚ್ಚಾಗಿದೆ. ಆದರೂ, ಶಿವಮೊಗ್ಗ ಹಾಗೂ ಹಾವೇರಿಯ ಡೆತ್ ಆಡಿಟ್‌ಗೆ ಸಮಿತಿ ಮಾಡಲಾಗುವುದು ಎಂದು  ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.

Advertisement

ನಗರದಲ್ಲಿಂದು (ಜೂನ್ 12) ಮಾತನಾಡಿದ ಅವರು, ಎರಡು ಜಿಲ್ಲೆಗಳ ಡೆತ್ ಅಡಿಟ್‌ಗಳ ಪರಿಶೀಲನೆಯನ್ನು ಮಾಡಿ ಸರ್ಕಾರಕ್ಕೆ ನೀಡಲಿದೆ. ಮೂರನೇ ಅಲೆಯ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶೀಘ್ರದಲ್ಲೇ ಶಿವಮೊಗ್ಗ ಜಿಲ್ಲೆಗೆ ಬಂದು ಮತ್ತೋಮ್ಮೆ ಸಭೆ ನಡೆಸುತ್ತೇನೆ. ಬಯೋಮೆಟ್ರಿಕ್ ಹಾಜರಿ ಬಳಿಕ   ವೈದ್ಯರು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತಹ ವೈದ್ಯರ ವಿರುದ್ಧ ಕ್ರಮಕ್ಕೆ  ಇಡೀ ರಾಜ್ಯದಲ್ಲಿ  ಹೊಸ  ವ್ಯವಸ್ಥೆ  ತರುವುದಕ್ಕೆ  ಆದೇಶ  ಮಾಡಿರುವೆ ಎಂದರು.

ಎಲ್ಲಾ ಜಿಲ್ಲಾಸ್ಪತ್ರೆಗಳ ಐಸಿಯು ಮತ್ತು ವಾರ್ಡ್ ಗಳಲ್ಲಿ  ಸಿಸಿ ಕ್ಯಾಮೆರಾ  ಅಳವಡಿಕೆ, ಜಿಯೋ ಫೆನಿಸಿಂಗ್ ಮಾಡಲಾಗುತ್ತದೆ. ೧೦೦ ಮೀಟರ್ ಕ್ಕಿಂತ ದೂರ ವೈದ್ಯರು ಮತ್ತು ಸಿಬ್ಬಂದಿ ಹೋದ್ರೆ ಗೊತ್ತಾಗುತ್ತದೆ.  ಬಯೋಮೆಟ್ರಿಕ್ ಪಂಚ್ ಮಾಡಿ ಹೊರಗೆ ಹೋದ್ರೆ ಗೊತ್ತಾಗುವುದಿಲ್ಲ. ಈ ಜಿಯೋ ಫೆನಿಸಿಂಗ್, ಜಿಯೋ ಟ್ಯಾಗಿಂಗ್ ಮಾಡಿದರೆ ಡ್ಯುಟಿ  ಯಲ್ಲಿದ್ದವರು ಎಷ್ಟು ಬಾರಿ ಹೊರಗೆ ಹೋದ್ರೂ ದಾಖಲು ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next