Advertisement

ರಾಜ್ಯದ ಜನರೆ ಭವಿಷ್ಯ ತೀರ್ಮಾನ ಮಾಡ್ತಾರೆ

03:32 PM Feb 13, 2023 | Team Udayavani |

ಕನಕಪುರ: ಮುಂದಿನ ದಿನಗಳಲ್ಲಿ ಯಾರು ಅಧಿಕಾರದಲ್ಲಿರುತ್ತಾರೆ ಎಂದು ಮತದಾರರೇ ಮುಂಬರುವ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಡಾ. ಕೆ.ಸುಧಾಕರ್‌ ಡಿಕೆ ಸಹೋದರರಿಗೆ ತಿರುಗೇಟು ನೀಡಿದರು.

Advertisement

ನಗರದಲ್ಲಿ ತಾಯಿ-ಮಗು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯ ಅಲ್ಲ. ಯಾರು ಇರ್ತಾರೆ, ಯಾರು ಹೋಗ್ತಾರೆ ಎಂದು ಮತದಾರರು ತಿರ್ಮಾನ ಮಾಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಭವಿಷ್ಯವೇನು ಜನತಾದಳ ಮತ್ತು ಕಾಂಗ್ರೆಸ್‌ ಭವಿಷ್ಯದು ರಾಜ್ಯದ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ಸರ್ಕಾರವನ್ನು ಕಳ್ಳರಿಗೆ ಹೋಲಿಕೆ ಮಾಡಿರುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ತಂಡವನ್ನು ಈಗಾಗಲೇ ಜನರು ಮನೆಗೆ ಕಳುಹಿಸಿದ್ದಾರೆ. ಈಗ ಅಧಿಕಾರದಲ್ಲಿರುವುದು ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದ ಜನಪರವಾದ ಸರ್ಕಾರ ಅವರು ಹೇಳಿದ ಸರ್ಕಾರವನ್ನು 2018ರಲ್ಲಿ ಮನೆಗೆ ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯದ್ದು ನೈಜತೆಯಿಂದ ಕೂಡಿರುವಂತ ಪ್ರಣಾಳಿಕೆ: ನಮ್ಮ ಪ್ರಣಾಳಿಕೆ ಜನಪರವಾಗಿ ಅತ್ಯಂತ ನೈಜತೆಯಿಂದ ಕೂಡಿರುವಂತಹ ಪ್ರಣಾಳಿಕೆ ಯಾಗಿರಲಿದೆ ಎಂದು ಸಚಿವ ಕೆ.ಸುಧಾಕರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆ ನೂರಕ್ಕೆ ನೂರರಷ್ಟು ಅನುಷ್ಠಾನ ಆಗುವಂತಹ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇವೆ. ಹಾಗಾಗಿ, ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಾಡುತ್ತಿರುವ ಪ್ರಣಾಳಿಕೆಯಲ್ಲಿ ಜನರಿಂದಲೇ ಸಲಹೆ ಪಡೆಯಲು ತೀರ್ಮಾನಿಸಿದ್ದೇವೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next