Advertisement

ಐಷಾರಾಮಿ ಕಾರುಗಳು ತೆರಿಗೆ ವಂಚನೆ: ಸಿಐಡಿ ತನಿಖೆಗೆ: ಸಚಿವ ಬಿ. ಶ್ರೀರಾಮುಲು

11:38 PM Mar 25, 2022 | Team Udayavani |

ಬೆಂಗಳೂರು: ಐಷಾ ರಾಮಿ ಕಾರುಗಳ ಜೀವಿತಾವಧಿ ತೆರಿಗೆ ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

Advertisement

ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2015ರ ಏ.1ರಿಂದ 2021ರ ನ.30ರ ಅವಧಿಯಲ್ಲಿ ನೋಂದಾಯಿಸಲಾದ 20 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳ ಪೈಕಿ 124 ವಾಹನಗಳು ಜೀವಿತಾವಧಿ ತೆರಿಗೆ ಕಟ್ಟಿಲ್ಲ ಎಂಬ ವಿಚಾರ ಪತ್ತೆಯಾಗಿದೆ.

ಇದನ್ನೂ ಓದಿ:ಯಾವ ಸ್ವಾಮೀಜಿಗಳ ಬಗ್ಗೆಯೂ ನಾನು ಅಗೌರವದಿಂದ ಮಾತನಾಡಿಲ್ಲ : ಸಿದ್ದು

ಈ ಪೈಕಿ 13 ವಾಹನಗಳನ್ನು ಜಪ್ತಿ ಮಾಡಿ 1.64 ಲಕ್ಷ ರೂ. ತೆರಿಗೆ ವಸೂಲು ಮಾಡಲಾಗಿದೆ. ತೆರಿಗೆ ಪಾವತಿಸದೆ ನೋಂದಣಿಯಾದ ವಾಹನಗಳ ಕಡತಗಳು ನಾಪತ್ತೆ ಯಾಗಿರುವುದಾಗಿ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸಿಐಡಿಗೆ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next