Advertisement

State Govt: ರಮೇಶ್ ಜಾರಕಿಹೊಳಿ ಸರಕಾರ ಬೀಳಿಸೋದಾದರೆ ಬೀಳಿಸಲಿ: ಸಚಿವ ಲಾಡ್ ಸವಾಲು

12:33 PM Nov 01, 2023 | Team Udayavani |

ಧಾರವಾಡ :  ರಾಜ್ಯ ಸರಕಾರವು ಬೀಳಿಸುವ ಬಗ್ಗೆ ಪದೇ ಪದೇ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದು, ಆ ಮಾದರಿ, ಈ ಮಾದರಿ ಎಂಬುದಾಗಿ ಹೇಳುವ ಬದಲು ಬೀಳಿಸೋದಾದರೆ ಒಮ್ಮೆ ಸರಕಾರ ಕೆಡವಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸುತ್ತೇನೆ, ಬೀಳಿಸುತ್ತೇನೆ ಅಂತ ರಮೇಶ್ ಜಾರಕಿಹೊಳಿ ಹೇಳುತ್ತಲೇ ಇದ್ದಾರೆ.ಒಮ್ಮೆ ಬೀಳಿಸಿ ಬಿಡ್ಲಿ ಬಿಡ್ರಿ. ಅದೇನು ಚೌಕಬಾರಾ ಆಟವಾ?  ಪ್ರತಿಯೊಬ್ಬರು ಸರ್ಕಾರ ಕೆಡುವುತ್ತೇವೆ ಅಂತಾರೆ. ಮಹಾರಾಷ್ಟ್ರ ಮಾದರಿ, ಆ ಮಾದರಿ ಈ ಮಾದರಿ ಅಂತಾರೆ. ಹೀಗಾಗಿ ಸರ್ಕಾರ ಕೆಡುವುದಾಗಿ ಹೇಳಿದವರನ್ನೇ ಹೆಚ್ಚಿಗೆ ಕೇಳಿರಿ ಎಂದರು.

ಬಿಜೆಪಿಗೆ ಚುನಾವಣೆ ಮಾತ್ರ ಆಸಕ್ತಿ ಇರೋದು.ಚುನಾವಣೆ ಮತ್ತು ಅಧಿಕಾರದಲ್ಲಿ ಮಾತ್ರ ಬಿಜೆಪಿಗೆ ಆಸಕ್ತಿ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದು ನೂರು ದಿನ ಆಯ್ತು. ಈಗಲೂ ಅಭಿವೃದ್ಧಿ ಆಗಿಲ್ಲ ಎಂಬುದನ್ನೇ ಹೇಳುತ್ತಾ ಕೂತಿದ್ದಾರೆ ಎಂದರು‌.

ಸಚಿವರ ಬದಲಾವಣೆ ಕೂಗು ಇರುವುದು ಸಹಜ. ಆದರೆ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next