Advertisement

ಮತ್ತೆ ಫೈರ್‌ ಬ್ರ್ಯಾಂಡ್‌ ಭಾಷಣ ಮಾಡಿದ ಕೇಂದ್ರ ಸಚಿವ ಹೆಗಡೆ !

11:32 AM Apr 30, 2018 | |

ಬೆಳಗಾವಿ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಮತ್ತೆ ವಿರೋಧಿಗಳತ್ತ ತನ್ನ ಮಾತಿನ ಬಾಣಗಳನ್ನು ಪ್ರಯೋಗಿಸಿದ್ದು, ಚುನಾವಣಾ ರಣಕಣದಲ್ಲಿ ಬುದ್ಧಿ ಜೀವಿಗಳು, ನಟ ಪ್ರಕಾಶ್‌ ರೈ ಅವರ ವಿರುದ್ಧ  ವಾಚಾಮಗೋಚರವಾಗಿ ವಾಗ್ಧಾಳಿ ನಡೆಸಿದ್ದಾರೆ. ಈ ಭಾಷಣದ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ರೋಡ್‌ ಶೋನಲ್ಲಿ ಮಾತನಾಡಿದ ಸಚಿವ ಅನಂತ್‌ ಕುಮಾರ್‌ ‘ಅನಂತ ಮೂರ್ತಿ ಅವರ ಹೆಸರು ಹೇಳಿ,ಅವರಿಲ್ಲ ಬಿಡಿ. ಉಳಿದ ಎಲ್ಲಾ ಬುದ್ದಿ ಜೀವಿಗಳು ಮಾರಾಟ ಆಗಿ ಹೋಗಿದ್ದಾರೆ. ಮೋದಿ ವಿರುದ್ದ ಪ್ರಚಾರ ನಡೆಸಲು ಗೌರಿ ಸಂತಾನ, ಆ ಸಂತಾನ ಎಂಬ ಎಲ್ಲರು ಬೆಂಬಲಿಸುತ್ತಾರೆ’ ಎಂದು ಕಿಡಿ ಕಾರಿದರು.

‘ಪ್ರಕಾಶ್‌ ರೈ ನಾಲಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ನಾನು ಹಿಂದು  ವಿರೋಧಿ ಅಲ್ಲ ಅನ್ನುತ್ತಾರೆ. ಮೋದಿ, ಶಾ , ಅನಂತ್‌ ಕುಮಾರ್‌ ಹೆಗಡೆ ವಿರೋಧಿ ಅನ್ನುತ್ತಾರೆ. ನಿದ್ದೆ ಮಂಪರಿನಲ್ಲಿ ಹುಚ್ಚು ಹಿಡಿದವರು ಇಂತಹ ಹೇಳಿಕೆ ನೀಡುತ್ತಾರೆ’ ಎಂದರು.

‘ನರೇಂದ್ರ ಮೋದಿ ಅವರು ಕಪ್ಪು ಹಣದ ಬಾಣ ಬಿಟ್ಟಾಗ ಒಬ್ಬೊಬ್ಬರೇ ದೇಶ ಬಿಟ್ಟು ಓಡಿದ್ರು, ಇನ್ನು ಕೆಲವೇ ದಿನಗಳಲ್ಲಿ ರಾಹುಲ್‌ ಗಾಂಧಿ ತಮ್ಮ ಕೊಲಂಬಿಯಾ ಗರ್ಲ್ ಫ್ರೆಂಡ್‌ ಜೊತೆ ಓಡಿ ಹೋಗಲಿದ್ದಾರೆ.ಮಗನ ಜೊತೆ ತಾಯಿ ಸೋನಿಯಾನೂ ದೇಶ ಬಿಡಲಿದ್ದಾರೆ’ ಎಂದು ಲೇವಡಿ ಮಾಡಿದರು. 

‘ಮಠಗಳ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಜಕಾತ್‌ ಮೂಲಕ ಮಸೀದಿ, ಚರ್ಚ್‌ಗಳಿಗೆ ಎಷ್ಟು ಹಣ ಬರುತ್ತದೆ ಎಂದು ಲೆಕ್ಕ ಇಟ್ಟಿದ್ದಾರಾ, ಜಕಾತ್‌ನಲ್ಲಿ ಬಂದ ಹಣದಿಂದ ಬಾಂಬ್‌,ಮಚ್ಚು, ಲಾಂಗ್‌ ಖರೀದಿ ಮಾಡಲಾಗುತ್ತಿದೆ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next