Advertisement

25.76 ಲಕ್ಷ ರೂ: ಪುಟ್ಟರಂಗ ಶೆಟ್ಟಿ ಪರ ಸಚಿವ ಡಿಕೆಶಿ ಬ್ಯಾಟಿಂಗ್‌

09:33 AM Jan 06, 2019 | Team Udayavani |

ಬೆಂಗಳೂರು: ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಸಿಬ್ಬಂದಿ ಮೋಹನ್‌ ಬಳಿ ಪತ್ತೆಯಾದ ರೂ. ಪ್ರಕರಣಕ್ಕೂ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದ ವಿಚಾರ.ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ  ತನಿಖೆ ನಡೆಯಲಿ,ತನಿಖೆ ನಡೆಯುವಾಗ ನಾನು ಏನೂ ಹೇಳಲಿಕ್ಕೆ ಆಗುವುದಿಲ್ಲ  ಎಂದರು. 

ಜನವರಿ 8 ರ ನಂತರ ಅಧಿವೇಶನ ನಡೆಯಲಿದೆ. ಬಿಜೆಪಿಯವರು ಏನೇ ಕೇಳುವುದು ಇದ್ದರೂ ಸದನದಲ್ಲಿ ಕೇಳಲಿ ಎಂದರು. 

ಹಿಂದೆ ಕೋಟಿ ಕೋಟಿ ರೂಪಾಯಿ ಸಿಕ್ಕಿತ್ತು, ಆ ರೀತಿ ಅಲ್ಲ ಇದು ಎಂದು ಬಿಜೆಪಿಗೆ ಟಾಂಗ್‌ನೀಡಿ ದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next